Posts

ಶಾಸಕರು ಬಹಿರಂಗ ಚರ್ಚೆಗೆ ಬಾರದೆ ತನ್ನ ಸ್ಥಾನದ ಗೌರವ ಮರೆತಿದ್ದಾರೆ; ವಸಂತ ಬಂಗೇರ || ಎಂ.ಎಲ್ ಸಿ ಪ್ರತಾಪಸಿಂಹ ರು ಈಗ ಸಿಂಹ ಹೋಗಿ ಬೆಕ್ಕಾಗಿದ್ದಾರೆ

3 min read

ಬೆಳ್ತಂಗಡಿ; ಇತ್ತೀಚೆಗೆ ನಾನು ಪತ್ರಿಕಾಗೋಷ್ಠಿ ಕರೆದು ಮಾನ್ಯ ಶಾಸಕರಾದ ಹರೀಶ್ ಪೂಂಜಾರವರು ಅಭಿವೃದ್ದಿ ಕಾಮಗಾರಿಗಳಿಗೆ ತಾನು ಮಂಜೂರು ಮಾಡಿಸಿ ತಂದಿರುವುದಾಗಿ ಪತ್ರಿಕಾ ಪ್ರಕಟಣೆ ನೀಡಿದ 833.69 ಕೋಟಿ ಅನುದಾನದ ಬಗ್ಗೆ ನೀಡಿದ ತಪ್ಪು ಲೆಕ್ಕವನ್ನು ಎತ್ತಿ ತೋರಿಸಿ ತಮ್ಮ ಸಮಕ್ಷಮ ದಾಖಲೆಗಳನ್ನು ಹಾಜರುಪಡಿಸಿ  ಸರಿಯಾದ ಲೆಕ್ಕದ ವಿವರ ನೀಡಿ ಅವರನ್ನು ಬಹಿರಂಗ ಚರ್ಚೆಗೆ  ಆಹ್ವಾನಿಸಿದ್ದೆ. ಅಲ್ಲದೆ  ಅವರು ತಪ್ಪು ಲೆಕ್ಕ ನೀಡಿದ ಬಗ್ಗೆ ಕ್ಷಮೆ ಕೋರುವಂತೆ ಆಗ್ರಹಿಸಿದ್ದೆ. ಆದರೆ ಇದರ ಬಗ್ಗೆ ಜಾಣ ಮೌನ ವಹಿಸಿರುವ ಶಾಸಕರು ಇದುವರೆಗೆ ಬಹಿರಂಗ ಚರ್ಚೆಗೂ ನನ್ನನ್ನು ಆಹ್ವಾನಿಸಿಲ್ಲ, ಕ್ಷಮೆಯನ್ನೂ ಯಾಚಿಸಿಲ್ಲ. ಆದರೆ ಇತ್ತಿಚೆಗೆ  ತನ್ನ ಸ್ಥಾನದ ಘನತೆ ಗೌರವವನ್ನು  ಮರೆತಿದ್ದಾರೆ ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.

ಬೆಳ್ತಂಗಡಿ ಆಸಾ ಸಾಲಿಯಾನ ಸಭಾಂಗಣದಲ್ಲಿ ಮಂಗಳವಾರ ಪಕ್ಷದ ವತಿಯಿಂದ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ಬಳಿ ನಾನು ಲೆಕ್ಕ ಕೆಳಿಲ್ಲ;

ವಿಧಾನ ಪರಿಷತ್ ಶಾಸಕ ಪ್ರತಾಪ ಸಿಂಹ ನಾಯಕ್‌ರವರು ನಾನು ಕೇಳಿದ ಲೆಕ್ಕದ ಬಗ್ಗೆ, ನನ್ನ ಸಲಹಾ ಸಮಿತಿಗೆ ಲೆಕ್ಕ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ ಎನ್ನುವ  ಬಾಲಿಶಃ ಪ್ರತಿಕ್ರಿಯೆ ನೀಡಿ ನನ್ನನ್ನು ಮತ್ತು ನನ್ನ ಪಕ್ಷದ ಇತರ ನಾಯಕರನ್ನು ಎತ್ತಿ ಕಟ್ಟುವ ಕೆಲಸಕ್ಕೆ ಕೈ ಹಾಕಿದ್ದಾರೆ. ಆದ್ದರಿಂದ ಅವರಿಗೆ ಮತ್ತು ಶಾಸಕ ಹರೀಶ್ ಪೂಂಜಾರಿಗೆ ಈ ಪತ್ರಿಕಾಗೋಷ್ಠಿಯ ಮೂಲಕ ನಾನು ಕೆಲವೊಂದು ಸವಾಲುಗಳನ್ನು ಹಾಕುತ್ತಿದ್ದೇನೆ.

ಶಾಸಕರು ನನ್ನ  ಸವಾಲನ್ನು ಸ್ವೀಕರಿಸದೆ  ಪಲಾಯನಗೈಯುವ ಮೂಲಕ ಅವರು ಕೊಟ್ಟಿರುವ ಲೆಕ್ಕದಲ್ಲಿ  ತಪ್ಪು ಇರುವುದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ.  ಕೂಡಲೇ ಶಾಸಕರು ಜನತೆಯ ಕ್ಷಮೆ ಯಾಚಿಸಿ ಇಲ್ಲ ಬಹಿರಂಗ ಚರ್ಚೆಗೆ  ದಿನ ನಿಗದಿಗೊಳಿಸಬೇಕು.


ನಾನು ಪ್ರತಾಪ ಸಿಂಹ ನಾಯಕ್‌ರ ಅನುದಾನದ ಲೆಕ್ಕ ಕೇಳಿದ್ದಲ್ಲ ಅವರು ವಿಧಾನ ಪರಿಷತ್ ಶಾಸಕರಾದ ನಂತರ ಅವರ ಕೊಡುಗೆ ಬೆಳ್ತಂಗಡಿಗೆ ಶೂನ್ಯ. ಹಾಗಾಗಿ ಅವರಲ್ಲಿ ಲೆಕ್ಕ ಕೇಳುವ ಪ್ರಮೇಯವೇ ಇಲ್ಲ. ಪ್ರತಾಪ್ ಸಿಂಹ ನಾಯಕರು ನಿದ್ದೆಯಲ್ಲಿ ಇದ್ದವನನ್ನು ಎಬ್ಬಿಸಬಹುದು. ನಟನೆ ಮಾಡುವವನನ್ನು  ಎಬ್ಬಿಸಲು ಸಾಧ್ಯವಿಲ್ಲ ಎಂದಿದ್ದಾರೆ.  ಆದರೆ ಶಾಸಕರು ಎಚ್ಚರಿಕೆಯಲ್ಲಿದ್ದರೂ ತಪ್ಪು ಲೆಕ್ಕದ ವಿಚಾರದಲ್ಲಿ ಅವರು ಇದುವರೆಗೆ ಎದ್ದಿಲ್ಲ. ಆದರೆ ನೀವು  ನಿದ್ರೆಯಲ್ಲಿ ಇರುವವರು ಎದ್ದುಬಂದು ಅವರ ಪರವಾಗಿ ಬ್ಯಾಟಿಂಗ್  ಮಾಡುತ್ತಿದ್ದೀರಿ. ಇದರಲ್ಲಿ  ಶಾಸಕರ ಹೊಗಳು ಭಟರಾದ ನಿಮ್ಮ ಪ್ರವೇಶ ನಮಗೆ ಅಗತ್ಯ ಇರಲಿಲ್ಲ ಎಂದರು.


ತಾಲೂಕಿನಲ್ಲಿ ನಡೆಯುತ್ತಿರುವ  ಮಿತಿಮೀರಿದ  ಭ್ರಷ್ಠಾಚಾರವನ್ನು ಮಟ್ಟಹಾಕದಿದ್ದಲ್ಲಿ ಹೋರಾಟ ಅನಿವಾರ್ಯ;

ಭ್ರಷ್ಠಾಚಾರವನ್ನು ಮೂಲದಿಂದಲೇ    ನಿರ್ಮೂಲನೆ ಮಾಡುವ ಬಗ್ಗೆ ಶಾಸಕರು ಮಾತನಾಡಿದ್ದಾರೆ. ಈ ಮೂಲ  ಎಂದರೆ ಯಾರು?  ನನ್ನ ಪ್ರಕಾರ ಮೂಲ ಎಂದರೆ ಅವರೇ ಆಗಿದ್ದಾರೆ. ಪರ್ಸಂಟೇಜ್ ಮಿತಿ ಈಗ ಏರಿಕೆಯಾಗಿದೆ. ತಾಲೂಕಿನಲ್ಲಿ ಐದು ಕೋಟಿಗೂ ಮಿಕ್ಕಿದ ಅನುದಾನದ ಕೆಲಸಗಳನ್ನು ತನ್ನದೇ ಮಾಲಕತ್ವದ ಸಂಸ್ಥೆಯ ಮೂಲಕ ಮಾಡಿಸುತ್ತಿದ್ದಾರೆ. ಅಧಿಕಾರಿಗಳಲ್ಲಿ ಎಸ್ಟಿಮೇಟ್ ಮಾಡುವ ಸಂದರ್ಭದಲ್ಲಿ ಅಧಿಕ ಮೊತ್ತದ ಎಸ್ಟಿಮೇಟ್ ಮಾಡಿಸುತ್ತಿದ್ದಾರೆ. ಅಧಿಕಾರಿಗಳ ಮುಖಾಂತರ ಅದಕ್ಕೆ ಇತರೆ ಕಂಟ್ರಾಕ್ಟ್ ದಾರರು ಟೆಂಡರ್  ಹಾಕದಂತೆ ಬೆದರಿಕೆ ಹಾಕಿಸುತ್ತಿದ್ದಾರೆ. ಅಲ್ಲದೆ 25 ಶೇ. ಅಧಿಕ ಪರ್ಸಂಟೇಜ್‌ಗೂ  ಹೆಚ್ಚು ಟೆಂಡರ್ ಹಾಕಿಸುತ್ತಿದ್ದಾರೆ. ಈ ಮೂಲಕ ತಾಲೂಕಿನಲ್ಲಿ ಭ್ರಷ್ಟಾಚಾರದಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ.  ಪ್ರತಾಪಸಿಂಹ ನಾಯಕ್‌ರವರಿಗೆ ಅವರ  ಕಚೇರಿಯ ಕೂಗಳತೆ  ದೂರದಲ್ಲಿರುವ ತಾಲೂಕು ಕಚೇರಿಯಲ್ಲಿ ಕೆಲವರ ಮುಖಾಂತರ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಠಾಚಾರ ಯಾಕೆ ಗೊತ್ತಾಗುತ್ತಿಲ್ಲ ಎಂದು ಪ್ರಶ್ನಿಸಿದರು.


"ಸಿಂಹ" ಹೋಗಿ "ಬೆಕ್ಕು" ಆಗಿದ್ದೀರಿ;

ಪ್ರತಾಪಸಿಂಹ ನಾಯಕ್ ರು

ಆದರೆ  ನೀವು ‘ಸಿಂಹ’ ಹೋಗಿ ‘ಬೆಕ್ಕು’ ಆಗಿದ್ದೀರಿ. ಶಾಸಕರ ನೇತೃತ್ವದವರ ಭ್ರಷ್ಠಾಚಾರದ  ವಿಚಾರದಲ್ಲಿ ನೀವು ತೆಪ್ಪಗಿದ್ದೀರಲ್ಲ ನಿಮಗೆ ಗೌರವ  ಇದೆಯೇ? ತಹಶಿಲ್ದಾರ್ ಮತ್ತು ತಾಲೂಕು ಕಛೇರಿಯ ಕೆಲ ಅಧಿಕಾರಿಗಳು ಬ್ರಹ್ಮಾಂಡ  ಭ್ರಷ್ಠಾಚಾರದಲ್ಲಿ ಮುಳುಗಿದ್ದು ಇದು ಇದೇ ರೀತಿ  ಮುಂದುವರಿದರೆ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ  ತಾಲೂಕು ಕಛೇರಿಯ ಮುಂದೆ ಜನತೆಯ ಪರವಾಗಿ ಪ್ರತಿಭಟನೆ ಅನಿವಾರ್ಯವಾದೀತು ಎಂದರು.

ಎಸಿ ಅವರು ಪಡೆದ ಎರಡು ಲಕ್ಷ ರೂ ಲಂಚ ವಾಪಾಸ್; ಬಂಗೇರ ಗಂಭೀರ ಆರೋಪ; 

ಪುತ್ತೂರು ಸಹಾಯಕ ಆಯುಕ್ತರು ಅಮಾಯಕರಿಂದ ಲಂಚದ ಮೂಲಕ ಕೋಟಿಗಟ್ಟಲೆ ಹಣ ಪಡೆದಿದ್ದಾರೆ. ಲಂಚ ನೀಡಿದವರ ಪೈಲುಗಳು ಒಂದೇ ದಿನದಲ್ಲಿ ಆದೇಶ ಆಗುತ್ತಿದ್ದು ಬಡವರ ಕಡತಗಳು ಪುತ್ತೂರು ಕಛೇರಿಯಲ್ಲಿ ಕೊಳೆತು ನಾರುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಶಾಸಕರು, ಎಂಎಲ್‌ಸಿ ಅವರು ವಿಫಲರಾಗಿದ್ದಾರೆ.

ಕೆಲ ದಿನಗಳ  ಹಿಂದೆ ನಿಮ್ಮದೇ ಪಕ್ಷದ ಹಿರಿಯ ನಾಯಕರೊಬ್ಬರು  ಎ.ಸಿ.ಯವರು ಪಡಕೊಂಡ ಎರಡು ಲಕ್ಷ ಲಂಚದ ಹಣವನ್ನು ಸಂಬಂಧ ಪಟ್ಟವರಿಗೆ  ವಾಪಾಸುಕೊಡಿಸಿದ ವಿಚಾರ ಬೆಳ್ತಂಗಡಿಯಾದ್ಯಂತ ಪ್ರಚಾರ ಆಗಿದ್ದು ಆ  ನಂತರ ಎ.ಸಿ   ಯವರು ಎರಡು ವಾರ    ನಾಚಿಕೆಯಿಂದ  ಬೆಳ್ತಂಗಡಿಗೆ ಬಂದಿಲ್ಲ. ಈ  ವಿಚಾರ  ಎತ್ತಲು ಪ್ರತಾಪಸಿಂಹರಿಗಾಗಲಿ, 

ಶಾಸಕರಿಗಾಗಲೀ ಯಾಕೆ    ಆಗುತ್ತಿಲ್ಲ ಎಂಬ ಗಂಭೀರ ವಿಚಾರವನ್ನು ವಸಂತ ಬಂಗೇರ ಪ್ರಸ್ತಾಪಿಸಿದರು.

ಅದೇ ಪ್ರಾಕೃತಿಕ ವಿಕೋಪದ ವೇಳೆ  ಮನೆ, ಕೃಷಿ ಜಾನುವಾರು ಕಳೆದುಕೊಂಡಾಗ ಪರಿಹಾರ ಕೊಡುವಲ್ಲಿ ಪಕ್ಷಪಾತ  ಮಾಡಲಾಗಿದೆ. ಹಾನಿ ಆಗದವರಿಗೂ    ಲಂಚ ಕೊಟ್ಟು ಮನೆ ಮಂಜೂರು ಮಾಡಿಸಿಕೊಡಲಾಗಿದೆ. ಇದರಲ್ಲಿ ನೈಜ ಸಂತ್ರಸ್ತರಿಗೆ  ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡಸೆಬೇಕೆಂದು ಆಗ್ರಹಿಸುತ್ತಿದ್ದೇನೆ ಎಂದರು.

ಬೆಳ್ತಂಗಡಿಯಲ್ಲಿ ಯಾಕೆ ಅಕ್ರಮ ಸಕ್ರ‌ಮ ಬೈಠಕ್ ಯಾಕಿಲ್ಲ;

ಪುತ್ತೂರು, ಸುಳ್ಯ, ಬಂಟ್ವಾಳ ಮುಂತಾದ ಕಡೆ ಅಕ್ರಮ-ಸಕ್ರಮ ಬೈಠಕ್ ಪ್ರಾರಂಭಗೊಂಡಿದ್ದರೂ ಬೆಳ್ತಂಗಡಿಯಲ್ಲಿ ಯಾಕೆ  ಪ್ರಾರಂಭಗೊಂಡಿಲ್ಲ ಎಂದು ಪ್ರಶ್ನಿಸಿದ ಅವರು ಕೂಡಲೇ  ಅಕ್ರಮ-ಸಕ್ರಮ ಬೈಠಕ್ ನಡೆಸಿ  ಬಡವರಿಗೆ ನ್ಯಾಯ  ಒದಗಿಸಿಕೊಡಬೇಕು.

ಕಡತದ ವಿಚಾರದಲ್ಲಿ ದಲ್ಲಾಳಿಗಳಿಗೆ  ಅವಕಾಶ ಕೊಡಬಾರದು. ಭ್ರಷ್ಟಾಚಾರಕ್ಕೆ ಅವಕಾಶ ಕೊಡಬಾರದು. ಈ‌ ವಿಚಾರವಾಗಿ  ತಹಶಿಲ್ದಾರ್ ಮತ್ತು  ಅವರ  ಕೈ ಕೆಳಗಿನ ಅಧಿಕಾರಿಗಳು ಇಂತಹ  ವ್ಯವಸ್ಥೆಗೆ ಆಸ್ಪದ ನೀಡಿದಲ್ಲಿ ಪ್ರತಿಭಟನೆ ಅನಿವಾರ್ಯವಾದೀತು ಎಂದು  ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ವಕ್ತಾರ ಕೇಶವ ಪಿ ಗೌಡ, ನ್ಯಾಯವಾದಿ ಮನೋಹರ್ ಕುಮಾರ್ ಇಳಂತಿಲ,‌ ಪಟ್ಟಣ ಪಂಚಾಯತ್ ಸದಸ್ಯರಾದ ಜಗದೀಶ್ ಡಿ, ರಾಜಶ್ರೀ ರಮಣ್, ಮುಸ್ತಾರ್ ಜಾನ್ ಮೆಹಬೂಬ್‌ ಮತ್ತು ಜನಾರ್ದನ ಕುಲಾಲ್ ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment