ಬೆಳ್ತಂಗಡಿ: ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಇದರ ವತಿಯಿಂದ ರಹ್ಮಾನಿಯಾ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ
ದೇಶದ 75 ನೇ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯಿತು. ದ್ವಜಾರೋಹಣವನ್ನು ಆಡಳಿತ ಸಮಿತಿ ಅಧ್ಯಕ್ಷ ಕೆ ಯು ಇಬ್ರಾಹಿಂ ಹಾಗೂ ಸಂಸ್ಥೆಯ ಪ್ರಾಂಶುಪಾಲ ಸಯ್ಯದ್ ಕಾಜೂರ್ ತಂಙಳ್ ನೆರವೇರಿಸಿದರು.ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳು, ಪ್ರೌಢ ಶಾಲೆಯ ರಕ್ಷಕ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎ ಮುಹಮ್ಮದ್ ಮತ್ತು ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿಗಳ ಪೋಷಕರು, ಆಂಗ್ಲ ಮಾಧ್ಯಮ ಶಾಲಾ ಅಭಿವೃದ್ಧಿ ಮಂಡಳಿ ನಿರ್ದೇಶಕರುಗಳು, ಕಛೇರಿ, ಮದರಸ, ಅಂಗ ಸಂಸ್ಥೆಯ ಸಿಬ್ಬಂದಿಗಳು, ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು, ಅಂಗ ಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ರಹ್ಮಾನಿಯ ಪ್ರೌಢ ಶಾಲೆ, ಪದವಿ ಪೂರ್ವ ವಿಭಾಗ, ಮಹಿಳಾ ಶರೀಅತ್ ವಿದ್ಯಾರ್ಥಿಗಳು, ಶಿಕ್ಷಕರು ಶಿಕ್ಷಕಿಯರು ಹಾಗೂ ಊರ ಹಿರಿಯರು, ಜಮಾಅತ್ ಬಾಂಧವರು ಉಪಸ್ಥಿತರಿದ್ದರು.ಕೇಂದ್ರ ಸದರ್ ಉಸ್ತಾದ್ ರಶೀದ್ ಮದನಿ ಸ್ವಾಗತಿಸಿದರು. ಸಂಸ್ಥೆಯ ಪ್ರಭಾರ ಮುಖ್ಯೋಪಾಧ್ಯಾಯ ಆಶಿಕ್ ಸಖಾಫಿ ಮುಈನಿ ಎಮ್.ಎ ರವರು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಯ್ಯದ್ ಕಾಜೂರ್ ತಂಙಳ್ ಸಂದೇಶ ಭಾಷಣ ಮಾಡಿದರು. ದರ್ಗಾ ಶರೀಫ್ ಮತ್ತು ಜಮಾಅತ್ ಆಡಳಿತ ಸಮಿತಿ ನಾಯಕರುಗಳು , ರಕ್ಷಕ ಶಿಕ್ಷಕರ ಸಂಘದ ನಾಯಕರುಗಳು , ಅಂಗ ಸಂಸ್ಥೆಯ ನಾಯಕರುಗಳು ಸಂಸ್ಥೆಯ ಸಿಬ್ಬಂದಿಗಳು ಊರಿನ ಹಿರಿಯರು, ಯುವಕರು ಹಾಗೂ ಎಸ್ಸೆಸ್ಸೆಫ್, ಎಸ್ವೈಎಸ್, ಕರ್ನಾಟಕ ಮುಸ್ಲಿಂ ಜಮಾಅತ್, ಶಾಲಾ ಕಾಲೇಜ್ ವಿಧ್ಯಾರ್ಥಿಗಳು ಭಾಗವಹಿಸಿದ್ದರು.
ದರ್ಗಾ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಜೆ.ಹೆಚ್ ಧನ್ಯವಾದವಿತ್ತರು.