Posts

ಅಕ್ಕನ ಅಂತರ್ಜಾತಿ ಪ್ರೇಮದಿಂದ‌ ಬೇಸತ್ತು ಕಾರ್ತಿಕ್ ಆತ್ಮಹತ್ಯೆ ಎಂದು ಶಂಕಿಸಿ ತಂದೆಯಿಂದ ದೂರು ಗೋಳಿತೊಟ್ಟು ಬರಾಯ ಕನ್ಯಾಡಿ ಗ್ರಾಮದ ಕಾರ್ತಿಕ್ ಮೃತ ವ್ಯಕ್ತಿ

1 min read


ಬೆಳ್ತಂಗಡಿ; ಅಕ್ಕನ‌ ಅಂತರ್ಜಾತಿ ಪ್ರೇ‌ಮ ಮತ್ತು ಆಕೆಗೆ ಆತನ ಜೊತೆಗೇ ಮದುವೆ ಆಗುವುದರ ವಿಚಾರವಾಗಿ ತೀವ್ರ ಚಿಂತೆಗೊಳಗಾದ ಕಾರಣದಿಂದಲೇ ನನ್ನ ಪುತ್ರ ಕಾರ್ತಿಕ್  ಮನೆಯ ಪಕ್ಕದ ರಬ್ಬರ್ ಮರಕ್ಕೆ ನೇಣುಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡದ್ದು‌ ಎಂದು  ಸ್ವತಹಾ ಆತನ‌ ತಂದೆಯೇ ಠಾಣೆಗೆ ಮಾಹಿತಿ‌ ನೀಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಬರಾಯಕನ್ಯಾಡಿ ಗ್ರಾಮದ ಗೋಳಿತೊಟ್ಟು ಪಲ್ಕೆ ಮನೆಯ ನಿವಾಸಿ ನಾರಾಯಣ ಪೂಜಾರಿ ಎಂಬವರ ಪುತ್ರ ಕಾರ್ತಿಕ್ (19ವ.) ಎಂಬವರು ಜು.19 ರಂದು ಕೃತ್ಯವೆಸಗಿಕೊಂಡಿದ್ದರು.


ಕಾರ್ತಿಕ್ ರ ತಂದೆ ನಾರಾಯಣ ಅವರು ತನ್ನ ಮೊದಲ‌ ಪತ್ನಿ ನಿಧನರಾದ ಬಳಿಕ ಎರಡನೇ ಮದುವೆಯಾಗಿದ್ದು, ಅಕೆಯ ಪುತ್ರ   ಕಾರ್ತಿಕ್‌ ಅವರು ತನ್ನ ಅಕ್ಕ ಕವಿತಾಳು ಅನ್ಯಜಾತಿಯ ಹುಡುಗನಾದ ಕುಶಾಲಪ್ಪ ಗೌಡ ಎಂಬವರನ್ನು ಪ್ರೀತಿಸಿ ಸಧ್ಯದಲ್ಲೇ  ಅವರನ್ನು ಮದುವೆಯಾಗುವ ವಿಚಾರದಲ್ಲಿ ಮನೆಯವರು ಮಾತುಕತೆ ನಡೆಸಿದ್ದರಿಂದ‌ ಬೇಸರಗೊಂಡು ಕೃತ್ಯವೆಸಗಿಕೊಂಡಿರುವ ಶಂಕೆ ಇದೆ ಎಂದು ತಂದೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜು.18 ರ ರಾತ್ರಿ ಎಂದಿನಂತೆ ಊಟ ಮುಗಿಸಿದ ಕಾರ್ತಿಕ್ ಆ ಬಳಿಕ 10 ಗಂಟೆಯ ನಂತರ ಮರುದಿನ‌ ಬೆಳಗ್ಗೆ   ಬೆಳಿಗ್ಗೆ  6.30 ಗಂಟೆಯ ಮಧ್ಯದ ಅವಧಿಯಲ್ಲಿ ಈ ಕೃತ್ಯವೆಸಗಿರುವ ಸಾಧ್ಯತೆ ಇದೆ. 

ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಶವ ಮಹಜರು ಬಳಿಕ ಮನೆಯವರಿಗೆ ಹಸ್ತಾಂತರಿಸಲಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment