ಬೆಳ್ತಂಗಡಿ: ನೆರಿಯ ಗ್ರಾಮದ ಬಾಂಜರು ಮಲೆ ಪ್ರದೇಶಕ್ಕೆ ಕೋವಿಡ್ ಪ್ರವೇಶವಾಗದಂತೆ ಎಚ್ಚರ ವಹಿಸಿರುವ ಸುದ್ದಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದ ಬೆನ್ನಿಗೇ ಇದೀಗ ಸದ್ರಿ ಪ್ರದೇಶಕ್ಕೆ ಭೇಟಿನೀಡಿದ ಶಾಸಕರು ಮತ್ತು ಅಧಿಕಾರಿಗಳು ಭೇಟಿ ನೀಡಿ ವೇಕ್ಸಿನ್ ಬಗ್ಗೆ ಜನಜಾಗೃತಿ ಮಂಡಿಸಲಾಯಿತು.
ಈ ಸಂದರ್ಭ ಕಾಲನಿ ಜನತೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು, ಕಾಲನಿಯ ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಬಂಜಾರು ಮಲೆಯ ರಸ್ತೆ, ನೆಟ್ವರ್ಕ್ ಮತ್ತು ಇನ್ನಿತರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಭರವಸೆಯನ್ನೂ ಶಾಸಕರು ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಧಿಕಾರಿ ಡಾ.ಕಲಾಮಧು, ನೆರಿಯ ಪಂಚಾಯತ್ ಅಧ್ಯಕ್ಷೆ ವಸಂತಿ, ಹಾಗೂ ಸದಸ್ಯರಾದ ಸಚಿನ್, ಅಶೋಕ್ ಬಾಂಜಾರು, ನೆರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ, ನವೀನ್ ನೆರಿಯ, ವಿಶ್ವನಾಥ್ ನೆರಿಯ ನೆರಿಯ ಗ್ರಾಮದ ಬಾಂಜರು ಮಲೆಗೆ ಭೇಟಿ ನೀಡಿ ಜನರಿಗೆ ಕೊರೋನಾ ವ್ಯಾಕ್ಸಿನ್ ಬಗ್ಗೆ ಮಾಹಿತಿ ನೀಡಿ ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಬಂಜಾರು ಮಲೆಯ ರಸ್ತೆ, ನೆಟ್ವರ್ಕ್ ಮತ್ತು ಇನ್ನಿತರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಭರವಸೆಯನ್ನು ನೀಡಲಾಯಿತು. ಭೇಟಿಯ ಸಂದರ್ಭದಲ್ಲಿ ತಾಲೂಕು ವೈದ್ಯಧಿಕಾರಿ ಡಾ.ಕಲಾಮಧು, ನೆರಿಯ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಸಂತಿ, ಹಾಗೂ ಸದಸ್ಯರಾದ ಸಚಿನ್, ಅಶೋಕ್ ಬಾಂಜಾರು, ನೆರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ, ನವೀನ್ ನೆರಿಯ, ವಿಶ್ವನಾಥ್ ಮೊದಲಾದವರು ನೆರಿಯ ಜೊತೆಗಿದ್ದರು.