Posts

ಆದಿವಾಸಿಗಳ ಜೀವ-ಜೀವನ ಉಳಿಸಿ; ಮನೆಮನೆ ಪ್ರತಿಭಟನೆ

1 min read

ಬೆಳ್ತಂಗಡಿ: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ, ರಾಜ್ಯಾದ್ಯಂತ ಆದಿವಾಸಿಗಳ ಜೀವ ಹಾಗೂ ಜೀವನ ಉಳಿಸಲು ಒತ್ತಾಯಿಸಿ ಮನೆಮನೆಗಳಲ್ಲಿ ಪ್ರತಿಭಟನೆ ನಡೆಸಿದರು. 

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಜ್ಯ ಸಮಿತಿ ಸದಸ್ಯ ಶೇಖರ್ ಎಲ್, ಕಾಡಿನ ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ, ಕೇಂದ್ರ ಸರ್ಕಾರಗಳು ವಿಫಲವಾಗಿದೆ. ಕೋವಿಡ್ ಸಂದರ್ಭದಲ್ಲಿ ನಿರುದ್ಯೋಗಿ ಯುವಕ/ಯುವತಿಯರಿಗೆ ನಿರುದ್ಯೋಗ ಭತ್ಯೆಯನ್ನು ನಿಲ್ಲಿಸುವ ಮೂಲಕ ಸರ್ಕಾರಗಳು ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಆರೋಪಿಸಿದರು.

ತಾಲೂಕಿನ ನೆರಿಯ , ಬಾಂಜಾರು , ಮಲವಂತಿಗೆ , ಲಾಯಿಲ , ಉಜಿರೆ , ನಾವೂರು , ನಡ , ಸವಣಾಲು , ಶಿರ್ಲಾಲು , ನಿಡ್ಲೆ , ಸುಲ್ಕೇರಿಮೊಗ್ರು , ಕುತ್ಲೂರು , ನಾರಾವಿ , ಕರಿಮಣೇಲು , ವೇಣೂರು, ಓಡಿಲ್ನಾಳ , ಮಚ್ಚಿನ ಸೇರಿದಂತೆ ತಾಲೂಕಿನ ವಿವಿಧೆಡೆ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಸಂಚಾಲಕ , ರಾಜ್ಯ ಸಹ ಸಂಚಾಲಕ ವಸಂತ ನಡ , ರಾಜ್ಯ ಸಮಿತಿ ಸದಸ್ಯ , ತಾಲೂಕು ಕಾರ್ಯದರ್ಶಿ ಜಯಾನಂದ ಪಿಲಿಕಲ , ಸಂಚಾಲಕ ಶೇಖರ್ ಎಲ್ , ಕೋಶಾಧಿಕಾರಿ ನಾಗೇಶ್ ಬಾಂಜಾರು , ಸದಸ್ಯರಾದ ಲಕ್ಷ್ಮಣ ನೆರಿಯ , ನಾರಾಯಣ ಆಲಂಗಾಯಿ , ಸುಂದರ ಕಾಟಾಜೆ , ದಯಾನಂದ ಬಾಂಜಾರು , ವಸಂತ ದಿಡುಪೆ , ಸದಾಶಿವ ನಾವೂರು , ವಸಂತ ಸವಣಾಲು , ಸದಾಶಿವ ಶಿರ್ಲಾಲು , ಸುಧಾಕರ ಕುತ್ಲೂರು ಸೇರಿದಂತೆ ಹಲವಾರು ನಾಯಕರು ಭಾಗಿಯಾಗಿದ್ದರು.
ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment