ಬೆಳ್ತಂಗಡಿ: ಮುಂಡಾಜೆಯ ಕಾಪು ತಿರುವಿನಲ್ಲಿ ಚಾರ್ಮಾಡಿಯಿಂದ ಉಜಿರೆ ಕಡೆ ಸಂಚರಿಸುತ್ತಿದ್ದ ಗೊಬ್ಬರ ಸಾಗಾಟದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿ ಉರುಳಿಬಿದ್ದ ಘಟನೆ ಬುಧವಾರ ನಡೆದಿದೆ.
ಅಪಘಾತದ ವೇಳೆ ಲಾರಿ ವಿದ್ಯುತ್ ಕಂಬಕ್ಕೂ ಡಿಕ್ಕಿ ಹೊಡೆದಿದ್ದು ನಷ್ಟ ಉಂಟಾಗಿದೆ.
ಸದ್ರಿ ಅಪಘಾತದಿಂದ ಲಾರಿ ಚಾಲಕ ಹಾಗೂ ನಿರ್ವಾಹಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಈ ಅಪಘಾತದ ವೇಳೆ ಲಾರಿಯು 11ಕೆ.ವಿ ಕಕ್ಕಿಂಜೆ- ಮುಂಡಾಜೆ ಮಾರ್ಗದ ವಿದ್ಯುತ್ ಕಂಬ ಮುರಿದು ಬಿದ್ದ ಕಾರಣ ಮುಂಡಾಜೆ ಮೆಸ್ಕಾಂ ಶಾಖಾ ಕಚೇರಿಯ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಯಿತು.