Posts

ಉಜಿರೆಯ ಹಿರಿಯ ಉದ್ಯಮಿ‌ ಹಾಗೂ ಸಮಾಜಸೇವಕ ಕೂಡಿಗೆ ಸುಬ್ರಾಯ ಶೆಣೈ ಇನ್ನಿಲ್ಲ

0 min read




ಬೆಳ್ತಂಗಡಿ: ಉಜಿರೆ ರಥಬೀದಿ ನಿವಾಸಿ ಹಿರಿಯ ಆರ್.ಎಸ್.ಎಸ್. ಕಟ್ಟಾಳು, ಉಜಿರೆ ಶ್ರೀ ರಾಮಮಂದಿರ ಗೌರವಾಧ್ಯಕ್ಷ ಸುಬ್ರಾಯ ಶೆಣೈ (85) ಅವರು ಉಜಿರೆಯ ಸ್ವಗೃಹದಲ್ಲಿ ವಯೋಸಹಜವಾಗಿ ಮಾ.28ರಂದು ನಿಧನ ಹೊಂದಿದರು.

ಸಮಾಜ ಸೇವಕರು, ಆರ್.ಎಸ್.ಎಸ್, ವಿಶ್ವ ಹಿಂದೂ ಪರಿಷತ್ ಹಿರಿಯ ಸಕ್ರಿಯ  ಕಟ್ಟಾಳುವಾಗಿದ್ದ ಅವರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಟ್ರಸ್ಟಿಯಾಗಿ ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ಕೊಡುಗೈ ದಾನಿಯಾಗಿದ್ದು ಅನೇಕ ಸೇವಾ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು.

ಮೃತರು ಸಹೋದರನನ್ನು ಅಗಲಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment