ಬೆಳ್ತಂಗಡಿ; ಎಸ್ಡಿಪಿಐ ಪಕ್ಷವನ್ನು ಬೆರೆ ಬೇರೆ ರೀತಿ ಇಷ್ಟರ ಮಟ್ಟಕ್ಕೆ ಬೆಳೆಯಲು ಕಾರಣವಾಗಿರುವ ಬಿಜೆಪಿಗೆ ಎಸ್ಡಿಪಿಐ ಇಲ್ಲದೇ ಇದ್ದರೆ ತಮ್ಮ ಬೇಳೆ ಬೇಯದು ಎಂದು ಗೊತ್ತಿದೆ.
ಇಲ್ಲದಿದ್ದರೆ ಎಸ್ಡಿಪಿಐ ಅನ್ನು ಬೇನ್ ಮಾಡುತ್ತೇವೆ ಎಂದು ವಿಧಾನ ಸಭೆಯಲ್ಲಿ ಮಾತನಾಡಿದ್ದ ಬಿಜೆಪಿ ಈಗ ಏಕೆ ಮೌನವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರೂ ಆಗಿರುವ ಮೇಲ್ಮನೆ ಶಾಸಕ ಹರೀಸ್ ಕುಮಾರ್ ಪ್ರಶ್ನಿಸಿದ್ದಾರೆ.
ಉಜಿರೆಯಲ್ಲಿ ನಡೆದ ಎಸ್ಡಿಪಿಐ ಪಕ್ಷದ ವಿಜಯೋತ್ಸವ ವೇಳೆ ಮೊಳಗಿದೆ ಎನ್ನಲಾದ ಪಾಕಿಸ್ತಾನ್ ಝಿಂದಾಬಾದ್ ವಿಚಾರವಾಗಿ ಅವರು ನೀಡಿದ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ.
ಎಸ್ಡಿಪಿಐ ಇಷ್ಟು ಬೆಳೆಯಲು ಬಿಜೆಪಿಯೇ ಕಾರಣ.ಕ್ಯಾಬಿನೆಡ್ ಮೀಟಿಂಗ್ ನಲ್ಲಿ ಇಂದೇ ಎಸ್ಡಿಪಿಐ ಬ್ಯಾನ್ ಅದೇಶ ಹೊರಡಿಸುತ್ತೇವೆ ಎಂದು ಕೆಲತಿಂಗಳುಗಳ ಹಿಂದೆ ಅಂದವರು ಈಗ ಯಾಕೆ ತೆಪ್ಪಗಿದ್ದಾರೆ.
ಬಿಜೆಪಿಯವರು ಅವರಿಗೆ ಬೇಕಾದ ಕೆಲವು ಕಾಯ್ದೆಗಳನ್ನು ಸುಗ್ರೀವಾಜ್ಣಸೆಗಳ ಮೂಲಕ ಮಧ್ಯರಾತ್ರಿ ಬೇಕಾದರೂ ಜಾರಿಗೆ ತರಬಹುದೆಂದಾದರೆ ಇದೇಕೆ ಸಾಧ್ಯವಾಗುತ್ತಿಲ್ಲ ಎಂದು ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ.
ಜೈಕಾರದಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬಹುಶಃ ಎಸ್ಡಿಪಿಐ ರಾಷ್ಟ್ರೀಯ ರಾಜಕೀಯ ಪಕ್ಷ. ಇಲ್ಲಿರುವ ಎಲ್ಲ ಪಕ್ಷಗಳೂ ಸಂಸ್ಕೃತಿ, ಧ್ವಜ, ಸಂವಿಧಾನವನ್ನು ಎತ್ತಿಹಿಡಿದು ಕೆಲಸ ಮಾಡುತ್ತಿದೆ. ಆದರೆ ಉಜಿರೆಯಲ್ಲಿ ಎಸ್ಡಿಪಿಐ ಯಿಂದ ಆಗಿರುವ ಕೆಲಸ ರಾಷ್ಟ್ರ ವಿರೋಧಿ. ಅಂತವರನ್ನು ಜೀವನ ಪರ್ಯಂತ ಜೈಲಲ್ಲಿಡುವ ಕೆಲಸ ಆಗಬೇಕು.
ಆ ಪಕ್ಷವನ್ನು ಸಂಪೂರ್ಣ ಹತೋಟಿಯಲ್ಲಿಡಬೇಕು. ಘೋಷಣೆ ಕೂಗಿದ ವ್ಯಕ್ತಿಯನ್ನು ಪತ್ತೆಹಚ್ಚಿ ಅವರ ಪೌರತ್ವವನ್ನೇ ರದ್ದುಪಡಿಸಬೇಕು ಎಂದು ಖಾರವಾಗಿ ನುಡಿದಿದ್ದಾರೆ.