ಬೆಳ್ತಂಗಡಿ ಬಿಜೆಪಿ ಮಂಡಲ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪಕ್ಷದ ಅಧ್ಯಕ್ಷ ಜಯಂತ ಕೋಟ್ಯಾನ್ ಸೂರಜ್ ಮತ್ತು ಅವರ ಬಳಗದವರಿಗೆ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.
ವೇಳೆ ಗ್ರಾ.ಪಂ ಚುನಾವಣೆಯ ಕಡಿರುದ್ಯಾವರ ಪಂಚಾಯತ್ ಪ್ರಭಾರಿ, ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಮಚ್ಚಿಮಲೆ ಅನಂತ ಭಟ್, ನಗರ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ಪ್ರಮುಖರಾದ ಸೀತಾರಾಮ ಬೆಳಾಲು, ಶ್ರೀನಿವಾಸ ಗೌಡ, ಅಶೋಕ್ ಕುಮಾರ್, ಪ್ರಶಾಂತ್, ಮಹಾಬಲ ಗೌಡ ಬಂದಾರು, ಮೊದಲಾದವರು ಉಪಸ್ಥಿತರಿದ್ದರು.
ಸೂರಜ್ ಗೌಡ ಅವರು ತಾಲೂಕಿನ ಪ್ರತಿಷ್ಠಿತ ಮನೆತನಗಳಲ್ಲೊಂದಾದ ವಳಂಬ್ರ ಮನೆಯವರಾಗಿದ್ದು, ತಾ.ಪಂ ಮಾಜಿ ಅಧ್ಯಕ್ಷ ವಳಂಬ್ರ ನಾರಾಯಣ ಗೌಡರ ಕಿರಿಯ ಪುತ್ರರಾಗಿದ್ದಾರೆ.
ಸೇರ್ಪಡೆ ಬಳಿಕ ಲೈವ್ ಮೀಡಿಯಾ ಜೊತೆ ಮಾತನಾಡಿ, ಬೆಜೆಪಿ ಪಕ್ಷದ ಕಾರ್ಯವೈಖರಿ, ಶಾಸಕ ಹರೀಶ್ ಪೂಂಜ ಅವರ ಕ್ರಿಯಾಶೀಲ ನಡೆ, ತಾಲೂಕಿನಲ್ಲಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿಗೆ ಸೇರುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದರು.