ಬೆಳ್ತಂಗಡಿ: ಸಿಡ್ಬಿ ಸಂಸ್ಥೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ವತಿಯಿಂದ ಸ್ವ ಉದ್ಯೋಗಕ್ಕೆ ಪೂರಕವಾಗಿ "ಸಿಡ್ಬಿ ಸಮೃದ್ಧಿ ಯೋಜನೆ" ಯಡಿ ನೀಡಲಾಗುವ 5 ಲಕ್ಷ ಸಾಲದ ನೆರವಿನ ಚೆಕ್ ಅನ್ನು ಮಡಂತ್ಯಾರು ವಲಯ ಕುಕ್ಕಳ ಒಕ್ಕೂಟ ವ್ಯಾಪ್ತಿಯ 'ಶ್ರೀದೇವಿ ಸ್ವ ಸಹಾಯ ಸಂಘದ ಕೇಶವತಿ ಅವರಿಗೆ ತಾಲೂಕಿನ ಯೋಜನಾಧಿಕಾರಿ ಯಶವಂತ್ ಎಸ್ ಇವರು ವಿತರಿಸಿದರು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ಆದಿತ್ಯಾ, ಒಕ್ಕೂಟದ ಅಧ್ಯಕ್ಷ ಕೋಟ್ಯಪ್ಪ ಪೂಜಾರಿ, ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿ ಸತೀಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಟಯರ್ ಅಂಗಡಿ ಮಾಲಕ ಸುನಿಲ್, ಕೇಶವತಿ ದಂಪತಿ ಧನ್ಯವಾದವಿತ್ತರು.