ಬೆಳ್ತಂಗಡಿ; ಸುಲ್ತಾನುಲ್ ಉಲಮಾ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಉಸ್ತಾದ್ ಸಾರಥ್ಯದಲ್ಲಿ ಮರ್ಕಝ್ ಆರ್ಸಿಎಫ್ಐ ಆರ್ಥಿಕ ನೆರವಿನಿಂದ ಕಾಜೂರು ದರ್ಗಾ ಶರೀಫ್ ವಠಾರದಲ್ಲಿ ನೂತನವಾಗಿ ರಚಿಸಿದ ಮಹಿಳಾ ಶರೀಅತ್ ಮತ್ತು ದಅವಾ ಕಾಲೇಜು ಕಟ್ಟಡದ ಉದ್ಘಾಟನೆಯು ನಡೆಯಿತು.
ತಾ. ಸಂಯುಕ್ತ ಜಮಾಅತ್
ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್, ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಸಯ್ಯಿದ್ ಕಾಜೂರು ತಂಙಳ್ ಉದ್ಘಾಟನೆ ನೆರವೇರಿಸಿದರು.
ಕಾಜೂರು ಮುದರ್ರಿಸ್ ಕೆ.ಎಚ್ ಸಿರಾಜುದ್ದೀನ್ ಝುಹ್ರಿ, ಆರ್ಸಿಎಫ್ಐ ನ ತಸ್ಲೀಂ ಸಖಾಫಿ ಮತ್ತು ಮುನ್ನಾಸ್ ಇಂಜಿನಿಯರ್ , ಗಣ್ಯರುಗಳಾದ ಹಾಜಿ ಬಿ.ಎಮ್ ಅಬ್ದುಲ್ ಹಮೀದ್ ಉಜಿರೆ, ಬಿ.ಎ ನಝೀರ್ ಬೆಳ್ತಂಗಡಿ, ಎ ಯೂಸುಫ್ ಹಾಜಿ ಉಪ್ಪಳ್ಳಿ, ಹಾಜಿ ಅಬ್ದುಲ್ ರಹಿಮಾನ್ ಅರಿಯಡ್ಕ ಪುತ್ತೂರು, ನೂರುದ್ದೀನ್ ಸಾಲ್ಮರ, ಎಂ.ಬಿ ನಝೀರ್ ಮಠ, ಕೆ ಮುಹಮ್ಮದ್ ಕಿಲ್ಲೂರು, ಫೈಝಲ್ ಸಲೀಂ ಬೆಂಗಳೂರು, ಅಶ್ರಫ್ ಆಲಿಕುಂಞಿ ಮುಂಡಾಜೆ, ಅಬ್ದುಲ್ ಕರೀಂ ಗೇರುಕಟ್ಟೆ, ಕೆರೀಂ ಕೆ.ಎಸ್ ಮುಂಡಾಜೆ, ಹಾಜಿ ಅಬ್ದುಲ್ ರಝಾಕ್ ಸೋಮಂತಡ್ಕ, ಶಂಶುದ್ದೀನ್ ಪಾಣೆಮಂಗಳೂರು, ರಶೀದ್ ಬಲಿಪಾಯ, ಯಾಕೂಬ್ ಕನ್ಯಾಡಿ, ಎಂ.ಎಚ್ ನಾಸಿರ್ ಮಾಸ್ಟರ್, ಅಬ್ದುಲ್ ಶುಕೂರ್ ಉಜಿರೆ, ಮುಹಮ್ಮದ್ ಮುಜೀಬ್ ನಿಡಿಗಲ್, ಅಬ್ದುಲ್ ಮುತ್ತಲಿಬ್ ಇಂದಬೆಟ್ಟು, ಅಬ್ದುಲ್ ಹಮೀದ್ ಕೇಳ್ತಾಜೆ, ಗ್ರಾ.ಪಂ ಸದಸ್ಯರಾದ ಕೆ.ಯು ಮುಹಮ್ಮದ್, ಶಾಹುಲ್ ಹಮೀದ್ ಮತ್ತು ಅಹಮ್ಮದ್ ಕಬೀರ್, ಕಾಜೂರು ಮಾಜಿ ಅಧ್ಯಕ್ಷರುಗಳಾದ ಕೆ ಶೇಕಬ್ಬ, ಬಿ.ಎ ಯೂಸುಫ್ ಶರೀಫ್,ಕೆ. ಯು ಉಮರ್ ಸಖಾಫಿ, ಇಬ್ರಾಹಿಂ ಮುಸ್ಲಿಯಾರ್ ಮತ್ತು ಮುಹಮ್ಮದ್ ಪಿ.ಎ, ಸಮಿತಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಪ್ರ. ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಕೆ.ಎಮ್ ಕಮಾಲ್, ಹಾಗೂ ಎಲ್ಲಾ ನಿರ್ದೇಶಕರು, ಕಚೇರಿ ವ್ಯವಸ್ಥಾಪಕ ಶಮೀಮ್, ಇವರುಗಳು ಉಪಸ್ಥಿತರಿದ್ದರು.
ಕಾಜೂರು ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಸ್ವಾಗತಿಸಿ ಅತಿಥಿ ಪರಿಚಯ ಮಾಡಿದರು.
ನವಾಝ್ ನೆಲ್ಲಿಗುಡ್ಡೆ ಕಾರ್ಯಕ್ರಮ ನಿರೂಪಿಸಿ ಡಿ.ಕೆ ರಶೀದ್ ಮದನಿ ವಂದಿಸಿದರು.