Posts

ಸಮೂಹ ಉಜಿರೆಯ ವತಿಯಿಂದ ಉಜಿರೆ ಬಯಲು ರಂಗ‌ಮಂದಿರದಲ್ಲಿ ಅಭಿಷೇಕ ನಾಟಕ ಯಶಸ್ವಿ ಪ್ರದರ್ಶನ

1 min read

ಬೆಳ್ತಂಗಡಿ; ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದ ಸಮೀಪದಲ್ಲಿರುವ ವನರಂಗ ಬಯಲು ರಂಗಮಂದಿರದಲ್ಲಿ ಸಮೂಹ ಉಜಿರೆ ಇವರ ನೇತೃತ್ವದಲ್ಲಿ ರಂಗಯಾನ  ಟ್ರಸ್ಟ್  ಮೈಸೂರು ತಂಡದವರಿಂದ  ಅಭಿಷೇಕ ನಾಟಕ ಪ್ರದರ್ಶನ ನಡೆಯಿತು.

ಬಾಸ ಮಹಾಕವಿ ಅವರ ರಚನೆಯ ಈ ನಾಟಕವನ್ನು ಪಾನ್ಯಂ ಸುಂದರ ಶಾಸ್ತ್ರಿ ಕನ್ನಡಕ್ಕೆ ಅನುವಾದಿಸಿದ್ದಾರೆ. 

ನೀನಾಸಂನ ಪದವೀಧರ ಹಾಗೂ ಉಜಿರೆ ಎಸ್.ಡಿ.ಎಂ ಕಾಲೇಜಿನ ರಂಗ ಶಿಕ್ಷಣ ಕೇಂದ್ರದ ಅಭಿನಯ ಪ್ರಶಿಕ್ಷಕರಾಗಿರುವ, ಸಾಲಿಯಾನ್ ಉಮೇಶ್ ನಾರಾಯಣ ನಾಟಕವನ್ನು ವಿನ್ಯಾಸಗೊಳಿಸಿ ನಿರ್ದೇಶಿಸಿದ್ದಾರೆ.

ರಾಮಾಯಣದ ಕಿಷ್ಕಿಂದಾ ಕಾಂಡದಲ್ಲಿ ರಾಮ- ಲಕ್ಷ್ಮಣ ರು ಸೀತೆಯನ್ನು ಹುಡುಕುತ್ತಾ ಸುಗ್ರೀವನೊಂದಿಗೆ ಮೈತ್ರಿ ಬೆಳೆಸಿದ ಪ್ರಕರಣವನ್ನು ಮೊದಲು ಮಾಡಿ, ರಾವಣನನ್ನು ಸಂಹರಿಸಿದ ಬಳಿಕ ವಿಭೀಷಣನಿಗೆ ಲಂಕೆಯ ಪಟ್ಟ ಕಟ್ಟಿ ಅಯೋಧ್ಯೆಗೆ ಮರಳಿ ರಾಜಾಧಿಪತ್ಯದಲ್ಲಿ ರಾಮನು ಅಭಿಷಿಕ್ತನಾಗುವರೆಗಿನ ಕಥೆಯನ್ನು ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು. 

ನಾಟಕದ ವಿವಿಧ ಪಾತ್ರಗಳಲ್ಲಿ ಪ್ರಕಾಶ್ ಕೆ ಕಾಸರಗೋಡು(ರಾಮ), ಪಲ್ಲವಿ ಸಿ.ಕೆ ಹುಣದೂರು ( ಸೀತೆ), ಮಹೇಂದ್ರ ಎಂ.ಎನ್ ಕೆ.ಆರ್ ನಗರ(ಲಕ್ಷ್ಮಣ), ನಟರಾಜು ಹೆಚ್ ಮಂಡ್ಯ( ಹನುಮಂತ), ನವೀನ್ ಕಾಂಚನ ಪುತ್ತೂರು (ವಾಲಿ), ಸುಮಂತ್ ಎಸ್.ಎಂ ಚನ್ನರಾಯಪಟ್ಟಣ (ಸುಗ್ರೀವ), ಸಂಗೀತಾ ಭಿಡೆ ಧರ್ಮಸ್ಥಳ (ತಾರೆ ಮತ್ತು ರಾಕ್ಷಸ), ಬೇಬಿ ತನುಶ್ರೀ ಮಂಡ್ಯ (ಅಂಗದ), ಮಂಜು ಭಗತ್ ದಡದಕಲ್ಲು(ರಾವಣ), ರಂಗಸ್ವಾಮಿ ಎ ಕುಣಿಗಲ್ (ಶಂಕುಕರ್ಣ) ಮತ್ತು ದಿಲೀಪ್ ಕುಮಾರ್ ಆರ್ ಚಿಕ್ಕಬಳ್ಳಾಪುರ (ವಿಭೀಷಣ) ರಾಗಿ ಪಾತ್ರಗಳಿಗೆ ಜೀವ ತುಂಬಿದರು.

ರಂಗಯಾನ ಟ್ರಸ್ಟ್ ಅಧ್ಯಕ್ಷ ವಿಕಾಸ್‌ಚಂದ್ರ ಅವರ ಮಾರ್ಗದರ್ಶನದಲ್ಲಿ, ಪ್ರಶಾಂತ್ ಬಿ ಮಾದರಸನಕೊಪ್ಪ  ಮತ್ತು ನಾರಾಯಣ ಕೆ ದೇಸಾಯಿ ಸಂಗೀತ, ಡಾ. ನಿಶಾ ಸಾಂಗತ್ಯ, ದಾಕ್ಷಾಯಿಣಿ, ದಿವ್ಯಾ, ರಾಧಾ, ಶ್ರೀ ಕಾಂತ್, ತ್ಯಾಗರಾಜು ದೇವರಹಳ್ಳಿ ಮೊದಲಾದವರು ರಂಗದ ಹಿಂದೆ ಯಶಸ್ಸಿನ ಭಾಗವಾದರು.

ಡಾ‌. ಕುಮಾರ ಹೆಗ್ಡೆ ಸ್ವಾಗತಿಸಿ ಪ್ರಸ್ತಾವನೆಗೈದರು. ಡಾ. ಬಿ ಯಶೋವರ್ಮ ಸಹಿತ ಗಣ್ಯರು ಭಾಗಿಯಾಗಿದ್ದರು.

ಸಮೂಹ ಉಜಿರೆಯ ಡಾ. ಕೃಷ್ಣಮೂರ್ತಿ, ಡಾ.ಎಂ.ಪಿ ಶ್ರೀನಾಥ್, ಸೋಮಶೇಖರ ಶೆಟ್ಟಿ ಸಹಿತ ಸಮೂಹದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಾಹಿತ್ಯ ಕಾರ್ಯಕ್ರಮಗಳ ಪ್ರೇರಣೆಗೆ ಶ್ರೀಕ್ಷೇತ್ರ ಧರ್ಮಸ್ಥಳದ ಡಾ‌‌. ಡಿ ವಿರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ ಹೆಗ್ಗಡೆಯವರು ಈ ಬಯಲು ರಂಗಮಂದಿರವನ್ನು ಕಳೆದ ವರ್ಷದ ಡಿ. 9 ರಂದು ಲೋಕಾರ್ಪಣೆಗೊಳಿಸಿದ್ದು ಅದರ ಸವಿನೆನಪಿಗಾಗಿ ಅದೇ ದಿನದಂದು ಈ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment