Posts

ಬೆಳ್ತಂಗಡಿ ಲಯನ್ಸ್ ಕ್ಲಬ್ ನಿಂದ ಕಾರ್ಗಿಲ್ ವಿಜಯದಿವಸ: ಸಾಧಕರಿಗೆ ಸನ್ಮಾನ

1 min read


ಬೆಳ್ತಂಗಡಿ; ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ‌ ಕಾರ್ಗಿಲ್ ವಿಜಯ ದಿವಸ ಆಚರಣೆ ಆ.9 ರಂದು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.‌ದೇವಿಪ್ರಸಾದ್ ಬೊಳ್ಮ ವಹಿಸಿದ್ದು ಸ್ವಾಗತಿಸಿದರು.

ಮುಖ್ಯ ಅತಿಥಿಯಾಗಿದ್ದ ಬೆಳ್ತಂಗಡಿ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸುನಿಲ್ ಶೆಣೈ ಮಾತನಾಡಿ, ಕಾರ್ಗಿಲ್ ಕದನದ ವಿಜಯ ಅದ್ವಿತೀಯವಾದುದು. ಅಪ್ರಚೋದಿತವಾಗಿ ದೇಶದೊಳಗೆ ನುಗ್ಗಿದ ವಿರೋಧಿಗಳನ್ನು ಹೊಡೆದುರುಳಿಸಿದ ಅವಿಸ್ಮರಣೀಯ ದಿನಗಳು. ಇಲ್ಲಿ ಅನೇಕ ಮಂದಿಯನ್ನು ನಾವು ಕಳೆದುಕೊಂಡರೂ ದೇಶದ ಇಂಚು ಇಂಚು ಭೂಮಿಯನ್ನು ಕಾಪಾಡಿದ್ದೇ ದೊಡ್ಡ ವಿಜಯ. ಕಾರ್ಗಿಲ್ ಕದನದಲ್ಲಿ ಸೈನಿಕರನ್ನು ಕಳೆದುಕೊಂಡದ್ದು ಮಾತ್ರವಲ್ಲದೆ ಅನೇಕ ಯುದ್ದೋಪಕರಣಗಳನ್ನೂ ಕಳೆದುಕೊಂಡಿದ್ದೇವೆ ಎಂದರು. ಕಾರ್ಗಿಲ್‌ನಲ್ಲಿ ನಡೆದ ದೃಷ್ಯಾವಳಿಗಳನ್ನು ಟಿ.ವಿ ಮಾಧ್ಯಮದ ಮೂಲಕ ವೀಕ್ಷಿಸುವ ಅವಕಾಶ ಸರಕಾರ ಕಲ್ಪಿಸಿತ್ತು. ಸೈನ್ಯದಲ್ಲಿ ಜಾತಿ ಬೇಧಕ್ಕೆ ಅವಕಾಶವಿಲ್ಲ. ಎಲ್ಲ ಧರ್ಮೀಯರೂ ಅಲ್ಲಿ ಸಮಾನವಾಗಿರುತ್ತೇವೆ. ಸಮಾಜ ತಮ್ಮ ಮಕ್ಕಳನ್ನು ಸೈನ್ಯಕ್ಕೆ ಸೇರಿಸುವಲ್ಲಿ ಹೆಚ್ಚು ಪ್ರೇರೇಪಿಸಬೇಕು. ಅದು ನಾವು ಕದನದಲ್ಲಿ ಭಾಗವಹಿಸಿದಷ್ಟೇ ಪುಣ್ಯದಾಯಕ ಕೆಲಸ ಎಂದರು. ಮಾಜಿ ಸೈನಿಕರ ಸಂಘದಿಂದ ಶಾಲಾ ಮಕ್ಕಳಿಗೆ ಸೈನ್ಯಕ್ಕೆ ಸೇರುವ ಪ್ರೇರಣೆ ಕೊಡುವ ಕೆಲಸ ಮಾಡಲಿದ್ದೇವೆ ಎಂದರು.  

ಮಾಜಿ ಸೈನಿಕರಿಗೆ ಸನ್ಮಾನ

ಎಳೆಯ ಪ್ರಾಯದಲ್ಲೇ ಅಪೂರ್ವ ಸಾಧನೆ ಮಾಡಿ ಗೌರವ ಡಾಕ್ಟರೇಟ್ ಪಡೆದ ಬಾಲಪ್ರತಿಭೆ ಶೌರ್ಯ ಅವರನ್ನು ಗೌರವಿಸಲಾಯಿತು. ಲಯನ್ಸ್ ಕ್ಲಬ್ ಸದಸ್ಯರಾಗಿರುವ ಮಾಜಿ ಸೈನಿಕರಾದ ಶಿವನ್ ಎ.ಕೆ ಮತ್ತು ಜಗನ್ನಾಥ ಶೆಟ್ಟಿ, ಅತಿಥಿಯಾಗಿದ್ದ ಸುನಿಲ್ ಶೆಣೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಡಾ. ಶೌರ್ಯ ಅವರಿಗೆ ಸನ್ಮಾನ

ಸಮಾರಂಭದಲ್ಲಿ ಪ್ರಾಂತ್ಯಾಧ್ಯಕ್ಷ  ವಸಂತ ಶೆಟ್ಟಿ, ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಹೇಮಂತ ರಾವ್ ಉಪಸ್ಥಿತರಿದ್ದರು.

ಹರ್‌‌ಘರ್ ತಿರಂಗಾದಂಗವಾಗಿ ಎಲ್ಲರಿಗೂ ರಾಷ್ಟ್ರ ಧ್ವಜ ವಿತರಣೆ

ಕಾರ್ಯದರ್ಶಿ ತುಕರಾಮ‌ ಬಿ ಗತ ಸಭೆಯ ಚಟುವಟಿಕೆಗಳ ವರದಿ ಮಂಡಿಸಿದರು. ಸುಶೀಲಾ ಹೆಗ್ಡೆ ಪ್ರಾರ್ಥನೆ ಹಾಡಿದರು. ಧತ್ತಾತ್ರೇಯ ಗೊಲ್ಲ ಧ್ವಜವಂದನೆ ನಡೆಸಿದರು. ಲಕ್ಷ್ಮಣ ಗೌಡ ನೀತಿ ಸಂಹಿತೆ ವಾಚಿಸಿದರು. ಕೋಶಾಧಿಕಾರಿ ಪಂಚಾಕ್ಷರಪ್ಪ ವಂದನಾರ್ಪಣೆಗೈದರು. 

ತಿರಂಗ ಧ್ವಜ ಕೊಡುಗೆ

ಸ್ವಾತಂತ್ರ್ಯೋತ್ಸವದ 75 ನೇ ವರ್ಷದ 'ಆಝಾದೀಕ ಅಮೃತ ಮಹೋತ್ಸವ' ಅಂಗವಾಗಿ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ತಿರಂಗ ಧ್ವಜ ಹಸ್ತಾಂತರಿಸಲಾಯಿತು.

-------

ವರದಿ; ಅಚ್ಚು ಮುಂಡಾಜೆ

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment