Posts

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಕ್ರೀಡೋತ್ಸವ ಉದ್ಘಾಟನೆ|| ಶ್ರೀ ಕಾ‌ಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಉಜಿರೆಯ ವಾರ್ಷಿಕ ಸಂಭ್ರಮಾಚರಣೆ

1 min read

ಬೆಳ್ತಂಗಡಿ; ಕ್ರೀಡಾಕೂಟ ದೇಶಮಟ್ಟದಿಂದ ಗ್ರಾಮಾಂತರ ಮಟ್ಟದವರೆಗೆ ನಡೆಯುತ್ತಿರುವುದುದನ್ನು ಗಮನಿಸುತ್ತಿದ್ದೇವೆ. ಇಂದು ಇಲ್ಲಿ ಸಮಾಜ ಬಾಂಧವರು ಹಮ್ಮಿಕೊಂಡ ಈ ಕ್ರೀಡೆಯಿಂದ ನಮ್ಮ ನಮ್ಮೊಳಗೆ ಪರಸ್ಪರ ಸಾಮರಸ್ಯ, ಬಾಂಧವ್ಯ, ಪರಿಚಯ ವೃದ್ಧಿಗೆ ಇರುವ ವ್ಯವಸ್ಥೆಯೂ ಆಗಿದೆ ಎಂದು  ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ಕಾರ್ಯಾಧ್ಯಕ್ಷ ಎಂ. ತುಂಗಪ್ಪ ಗೌಡ ಹೇಳಿದರು.

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘ, ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಇವರ ನೇತೃತ್ವದಲ್ಲಿ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಉಜಿರೆ ಇದರ ವಾರ್ಷಿಕ ಸಂಭ್ರಮಾಚರಣೆ ಪ್ರಯುಕ್ತ ಕ್ರೀಡೋತ್ಸವ ಕಾರ್ಯಕ್ರಮ ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಮುಂಭಾಗದ ಸಂಘದ ನಿವೇಶನದಲ್ಲಿ ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಕ್ರೀಡಾಂಗಣದಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು ವಹಿಸಿದ್ದು ಸಂಘದ ಚಟುವಟಿಕೆ ಮತ್ತು ಮುಂದಿನ ಗುರಿಯನ್ನು ತಿಳಿಸಿದರು.

ಈಗಾಗಲೇ ಸಹಕಾರಿ‌ ಸಂಘಕ್ಕೆ ಉಜಿರೆ ಯಲ್ಲಿ15 ಸೆಂಟ್ಸ್ ಜಮೀನನ್ನು 1.25 ಕೋಟಿ ವೆಚ್ಚದಲ್ಲಿ ಖರೀದಿಸಿ ಅಲ್ಲಿ ಮುಂದಕ್ಕೆ ಬ್ಯಾಂಕ್ ಕಟ್ಟಡ ಬರಲಿದೆ. ಇದೀಗ ಉಜಿರೆಯಲ್ಲಿ ಒಂದು ಎಕರೆಯಷ್ಟು ಜಾಗವನ್ನು 2.25 ಕೋಟಿ ರೂ.‌ವೆಚ್ಚದಲ್ಲಿ ಖರೀದಿ ಪ್ರಕ್ರೀಯೆ ನಡೆಯುತ್ತಿದ್ದು, ಇದೇ ಜಾಗವನ್ನು ಸಮಾಜ ಬಾಂಧವರ ಕೇಂದ್ರಸ್ಥಳವಾಗಿ ಇಟ್ಟುಕೊಂಡು ಮುಂದಕ್ಕೆ ಇಲ್ಲಿ ಕ್ಲಬ್ ಆರಂಭಿಸುವ ಉದ್ದೇಶ ಹೊಂದಿದ್ದೇವೆ. ಅದಕ್ಕಾಗಿ 10 ಕೋಟಿ ರೂ. ಯೋಜನೆ ರೂಪಿಸಿದ್ದೇವೆ ಎಂದರು.

ಸಮಾರಂಭದಲ್ಲಿ ಅತಿಥಿಯಾಗಿದ್ದ ಪತ್ರಕರ್ತ ಚೈತ್ರೇಶ್ ಇಳಂತಿಲ ಶುಭಕೋರಿದರು. 

ಸಮಾರಂಭದಲ್ಲಿ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಉಜಿರೆ ಇದರ ಅಧ್ಯಕ್ಷ ರಂಜನ್ ಜಿ ಗೌಡ, ಮಹಿಳಾ ವೇದಿಕೆ ಅಧ್ಯಕ್ಷೆ ಅಪರ್ಣಾ ಶಿವಕಾಂತ್ ಗೌಡ, ಮಹಿಳಾ ಯುವ ವೇದಿಕೆ ಅಧ್ಯಕ್ಷೆ ಅನುಪಮ ಸತೀಶ್ ಗೌಡ, ಬಂಗಾಡಿ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಎನ್ ಲಕ್ಷ್ಮಣ ಗೌಡ ಬಂಗಾಡಿ, ಎಸ್.ಪಿ ಗ್ರೂಪ್ಸ್ ಮಾಲಿಕ ಶಿವಕಾಂತ ಗೌಡ, ಜಿ.ಪಂ ಮಾಜಿ ಸದಸ್ಯೆ ಸೌಮ್ಯಲತಾ ಜಯಂತ ಗೌಡ,‌ಧರ್ಮಸ್ಥಳ ಮಂಡಲ ಪಂಚಾಯತ್ ಮಾಜಿ ಅಧ್ಯಕ್ಷ ಸುಂದರ ಗೌಡ ಪುಡ್ಕೆತ್ತು, ನ್ಯಾಯವಾದಿ ಕೇಶವ ಗೌಡ ಪಿ, ಎಲ್.ಡಿ‌ ಬ್ಯಾಂಕ್ ಉಪಾಧ್ಯಕ್ಷ ವಾಮನ ಗೌಡ, ಸಂಘದ ಕಾರ್ಯದರ್ಶಿ ಬಾಲಕೃಷ್ಣ ಗೌಡ ಕಲ್ಲಾಜೆ, ಯುವ ವೇದಿಕೆ ಕಾರ್ಯದರ್ಶಿ ಅನಿಲ್ ಗೌಡ, ಮಹಿಳಾ ಯುವ ವೇದಿಕೆ ಕಾರ್ಯದರ್ಶಿ ದಿವ್ಯಾ ವಸಂತ ಗೌಡ, ತಾಕೂಕು ಸಂಘದ ಉಪಾಧ್ಯಕ್ಷ ಲಕ್ಷ್ಮಣ ಗೌಡ ಬೇಂಗಲ, ಶಿಶಿಲ ಗ್ರಾ.ಪಂ ಅಧ್ಯಕ್ಷ ಸಂದೀಪ್ ಗೌಡ ಅಮ್ಮುಡಂಗೆ, ಶಿಬಾಜೆ ಗ್ರಾ.ಪಂ ಅಧ್ಯಕ್ಷ ರತೀಶ್ ಗೌಡ, ಕ್ರೀಡಾ ಸಂಚಾಲಕ ಮಂಜುನಾಥ ಗೌಡ ಮುಂಡತ್ತೋಡಿ ಮೊದಲಾದವರು ಉಪಸ್ಥಿತರಿದ್ದರು.







ಯುವ ವೇದಿಕೆ ಅಧ್ಯಕ್ಷ ಸುಧಾಕರ ಗೌಡ ಸ್ವಾಗತಿಸಿ ಪ್ರಸ್ತಾವನೆಗೈದರು. ಫುಟ್‌ಬಾಲ್ ಆಟಗಾರರಾದ ಹಿಮಕರ ಗೌಡ ಕೂಡಿಗೆ ಮತ್ತು ಸೃಹನ್ ಕ್ರೀಡಾ ಜ್ಯೋಗಿ ಸ್ವೀಕರಿಸಿದರು.

ಪಿಡಿಒ ಗಾಯತ್ರಿ ಮತ್ತು ಪ್ರಮೋದ್ ಗೌಡ ಹಲೆಕ್ಕಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಗೌಡ ಕೆದ್ಲ ಧನ್ಯವಾದ ಸಲ್ಲಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment