Posts

ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ಅಮ್ಮನವರ ತುಳು ಭಕ್ತಿಗೀತೆ ಬಿಡುಗಡೆ

1 min read


ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ಅಮ್ಮನವರ ’ಕಕ್ಯಬೂಡುದ ಲೆಪ್ಪು’ ತುಳು ಭಕ್ತಿಗೀತೆಯನ್ನು ಜ. 9ರಂದು ಶ್ರೀ ಕ್ಷೇತ್ರದ ಅರ್ಚಕರಾದ ರಾಜೇಂದ್ರ ಅರ್ಮುಡ್ತಾಯರವರು ಶ್ರೀ ದೇವರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಸತ್ಯಶಂಕರ ಶೆಟ್ಟಿ, ಉಪಾಧ್ಯಕ್ಷ ಎ. ಮುತ್ತಪ್ಪ ಮಾಸ್ತರ್ ಅಗ್ಪಲ, ಕೋಶಾಧಿಕಾರಿ ಸಂಜೀವ ಗೌಡ ಅಗ್ಪಲ, ಕಾರ್ಯದರ್ಶಿ ನಾರಾಯಣ ರೈ ಅಟ್ಟದಡ್ಕ, ಉತ್ಸವ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ದೇವಳದ ಮ್ಯಾನೇಜರ್ ವೀರೇಂದ್ರ ಕುಮಾರ್ ಜೈನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಜೀರ್ಣೋದ್ಧಾರ ಮತ್ತು ಉತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹರಿಣಾಕ್ಷಿ ಮತ್ತು ಗುರುಪ್ರಕಾಶ್ ಕೊರಡಿಂಗೇರಿ ನಿರ್ಮಾಣದಲ್ಲಿ ಮೂಡಿ ಬಂದ ’ಕಕ್ಯಬೂಡುದ ಲೆಪ್ಪು’ ಇದರ ಸಾಹಿತ್ಯವನ್ನು ಪಾರ್ಶ್ವನಾಥ ಜೈನ್ ಹೇರೆತ್ಯಾರು ಕಕ್ಯಪದವು ರಚಿಸಿದ್ದು, ಜೈದೀಪ್ ಜಿ.ಕೆ ಕೊರಡಿಂಗೇರಿ ಹಾಡಿದ್ದಾರೆ. ದುರ್ಗಾಪ್ರಸಾದ್ ಕಕ್ಯಪದವು ಸಂಕಲನ ಹಾಗೂ ವಿಶೇಷ ಸಹಕಾರ ನೀಡಿದ್ದಾರೆ. ಈ ಹಾಡು ಶ್ರೀ ಕ್ಷೇತ್ರ ಕಕ್ಯಬೀಡು ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment