ಬೆಳ್ತಂಗಡಿ; ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಝೀರ್ ಅವರು ಡಿ.28 ರಂದು ಬೆಳ್ತಂಗಡಿಯಲ್ಲಿ ನಡೆಯಲಿರುವ ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ವಕೀಲರ ಭವನ(ಬಾರ್ ಅಸೋಸಿಯೇಷನ್ ಬಿಲ್ಡಿಂಗ್) ಉದ್ಘಾಟನೆಗೆ ಬೆಳ್ತಂಗಡಿಗೆ ಆಗಮಿಸಲಿದ್ದಾರೆ.
ಅದಕ್ಕೆ ಪೂರ್ವವಾಗಿಯೇ ಡಿ.26ರ ರಿಂದಲೇ ಅವರು ಹೈದರಾಬಾದ್ನಿಂದ ಹೊರಡು ಮುಂದಿನ ನಾಲ್ಕು ದಿನಗಳಲ್ಲಿ ದ.ಕ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಹಲವು ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಶಿಲಾನ್ಯಾಸಗಳನ್ನು ನಡೆಸಿಕೊಡಲಿದ್ದಾರೆ.
ಡಿ.26 ರಂದೇ ರಾತ್ರಿ 8.10ಕ್ಕೆ ಅವರು ವಿಮಾನದ ಮೂಲಕ ಹೈದರಾಬಾದ್ನಿಂದ ಮಂಗಳೂರಿಗೆ ಆಗಮಿಸಿ, ವಿಮಾನ ನಿಲ್ದಾಣದಲ್ಲಿ ಲಘು ವಾಸ್ತವ್ಯ. ಬಳಿಕ ಸುಬ್ರಹ್ಮಣ್ಯ ಕ್ಕೆ ತೆರಳಿ, ವಾಸ್ತವ್ಯ ಮಾಡಲಿದ್ದಾರೆ.
ಡಿ.28ರ ಬೆಳಿಗ್ಗೆ 9 ಗಂಟೆಗೆ 10.30ಕ್ಕೆ ಪುತ್ತೂರಿಗೆ ಆಗಮಿಸಿ, 11 ಗಂಟೆಗೆ ವಕೀಲರ ಭವನ ಕಟ್ಟಡ ಉದ್ಘಾಟನೆ. ಅಲ್ಲಿನ ಕೋರ್ಟ್ ಕಟ್ಟಡದ ಎರಡನೇ ಹಂತದ ಕಟ್ಟಡ ಹಾಗೂ ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ಕ್ವಾರ್ಟಸ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮಧ್ಯಾಹ್ನ 1.15ಕ್ಕೆ ಪುತ್ತೂರಿನಿಂದ ಹೊರಟು 2.15ಕ್ಕೆ ಸುಳ್ಯಕ್ಕೆ ಆಗಮಿಸಿ ಅಲ್ಲಿ ಮಧ್ಯಾಹ್ನ 2.30ಕ್ಕೆ ಅಲ್ಲಿ ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ವಸತಿ ಗೃಹಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಸಲಿದ್ದಾರೆ.
ಸಂಜೆ 4.45ಕ್ಕೆ ಬೆಳ್ತಂಗಡಿಗೆ ಆಗಮಿಸುವ ಅವರು ಇಲ್ಲಿ 5 ಗಂಟೆಗೆ, 2.10 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾದ ವಕೀಲರ ಭವನದ ಕಟ್ಟಡ ಉದ್ಘಾಟನೆ ನಡೆಸಿ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಂಜೆ 6 ಗಂಟೆಗೆ ಬೆಳ್ತಂಗಡಿಯಿಂದ ನಿರ್ಗಮಿಸಿ ರಾತ್ರಿ 7.30ಕ್ಕೆ ಮೂಡುಬಿದ್ರಿಗೆ ನಿರ್ಗಮಿಸಿ ಸ್ವಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಡಿ.29ರ ಬುಧವಾರ ಬೆಳಿಗ್ಗೆ 8 ಗಂಟೆಗೆ ಮೂಡಬಿದ್ರೆಯಿಂದ ನಿರ್ಗಮಿಸಿ 8.45ಕ್ಕೆ ಮಂಗಳೂರಿಗೆ ಆಗಮಿಸಲಿದ್ದಾರೆ. ಬೆಳಿಗ್ಗೆ 9ಕ್ಕೆ ನ್ಯಾಯಾಂಗ ಇಲಾಖೆ ಅಧಿಕಾರಿಗಳ ಕ್ವಾರ್ಟಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಡೆಸಲಿದ್ದಾರೆ.
11ಕ್ಕೆ ಬಂಟ್ವಾಳಕ್ಕೆ ಆಗಮಿಸಿ 11.15ಕ್ಕೆ ಬಂಟ್ವಾಳದಲ್ಲಿ ನ್ಯಾಯಾಂಗ ಇಲಾಖೆ ಅಧಿಕಾರಿಗಳ ವಸತಿ ಗೃಹಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಸಿಕೊಡಲಿದ್ದಾರೆ. ಅಲ್ಲಿಂದ ಅವರು 1.45ಕ್ಕೆ ಮತ್ಯೆ ಮೂಡಬಿದ್ರಿಗೆ ಆಗಮಿಸಿ ಅವರ ಸ್ವಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಡಿ.30ರ ಗುರುವಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮೂಡಬಿದ್ರಿಯ ಆಳ್ವಾಸ್ ಕಾಲೇಜಿನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಳಿಕ
2022ರ ಜನವರಿ 1ರ ಬೆಳಿಗ್ಗೆ 11.25ಕ್ಕೆ ಮಂಗಳೂರಿನಿಂದ ವಿಮಾನದ ಮೂಲಕ ಅವರು ಬೆಂಗಳೂರಿಗೆ ಪ್ರಯಾಣ ನಡೆಸಲಿದ್ದಾರೆ.
ಪ್ರವಾಸದುದ್ದಕ್ಕೂ ಬಿಗು ಭದ್ರತೆ; ಕಾರ್ಯಕ್ರಮ ನೇರ ಪ್ರಸಾರಕ್ಕೆ ತಡೆ:
ಜಸ್ಟಿಸ್ ಅಬ್ದುಲ್ ನಝೀರ್ ಅವರು ಮೂಲತಃ ಮೂಡಬಿದ್ರೆಯವರಾದರೂ ಪ್ರಸ್ತುತ ಸುಪ್ರಿಂ ಕೋರ್ಟ್ ನ ನ್ಯಾಯಾಧೀಶರಾಗಿ ಉನ್ನತ ಸ್ಥಾನದಲ್ಲಿದ್ದಾರೆ. ಅತ್ಯಂತ ಸರಳ ಮತ್ತು ಸೌಮ್ಯ ಸ್ವಭಾವದವರಾದ ಅವರು ಮಿತ ಭಾಷಿಯಾಗಿ, ಉತ್ತಮ ಮಾರ್ಗದರ್ಶಕರಾಗಿ ಅನೇಕ ಯುವ ವಕೀಲರಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಪ್ರವಾಸದ ಉಸ್ತುವಾರಿಯನ್ನು ಜಿಲ್ಲಾಡಳಿತದ ಮೂಲಕ ಉನ್ನತ ಪೊಲೀಸ್ ಅಧಿಕಾರಿಗಳು ನೋಡಿಕೊಳ್ಳಲಿದ್ದಾರೆ. ಭಾರತದ ಪರಮೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಅವರದೇ ಆದ ಭದ್ರತಾ ಕ್ರಮಗಳು ಇರಲಿವೆ. ಸಾರ್ವಜನಿಕ ಭೇಟಿಯಾಗಲೀ, ಜನಪ್ರತಿನಿಧಿಗಳ ಜೊತೆ ನೇರ ಸಂದರ್ಶನವಾಗಲೀ ಇರುವುದಿಲ್ಲ. ಅದೇ ರೀತಿ ಯೂಟ್ಯೂಬ್ ಚಾನೆಲ್ ಮೂಲಕ ನೇರ ಪ್ರಸಾರಕ್ಕೆ ಕೂಡ ಅವಕಾಶಗಳಿಲ್ಲ ಎಂದು ವಕೀಲರ ಸಂಘ ದೃಢಪಡಿಸಿದೆ.
ಪ್ರವಾಸದಲ್ಲಿ ಪ್ರತಿದಿನ ಜಿಲ್ಲೆಯ ಒಂದು ಕಡೆ ಪ್ರಥಮ ಸಾರ್ವಜನಿಕ ಪ್ರದೇಶದಲ್ಲಿ ಅವರಿಗೆ ಜಿಲ್ಲಾ ಪೊಲೀಸ್ ವಿಶೇಷ ದಳದಿಂದ ಗೌರವ ರಕ್ಷೆ ಇರಲಿದೆ.