Posts

ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರಿಂದ ಮುಂದೆ ದೇಶ ಸರ್ವನಾಶವಾಗಲಿದೆ; ಮಹೇಶ್ ಶೆಟ್ಟಿ ತಿಮರೋಡಿ|| ಶಾಸಕರ, ಸಂಸದರ ಸಿಡಿ ನಮ್ಮಲ್ಲಿದೆ- ಅಗತ್ಯ ಬಿದ್ದರೆ ಬಿಡುಗಡೆ ಮಾಡುತ್ತೇನೆ - ಕುತೂಹಲ ಕೆರಳಿಸಿದ ಹೇಳಿಕೆ

1 min read



ಬೆಳ್ತಂಗಡಿ: 
ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕೇಂದ್ರ ಸರಕಾರ ದೇಶದ ಸಂಪತ್ತನ್ನು ಮಾರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರು ದೇಶವನ್ನು ಸರ್ವನಾಶ ಮಾಡುವ ಅಪಾಯವಿದೆ. ಹಿಂದೂ ಧರ್ಮದ ಯಾವುದೇ ಪವಿತ್ರ ಸ್ಥಾನಗಳನ್ನು ಮುಟ್ಟಲು ಬಂದರೆ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಗುಡುಗಿದ್ದಾರೆ.

ರಾಜ್ಯ ಬಿಜೆಪಿ ಸರಕಾರದ ಆದೇಶದಂತೆ ರಾಜ್ಯಾದ್ಯಂತ ಪುರಾತನ 
ದೇವಾಲಯಗಳನ್ನು, ಪ್ರಾರ್ಥನಾ ಮಂದಿರಗಳನ್ನು ಧ್ವಂಸ ಮಾಡಲಾಗುತ್ತಿರುವುದನ್ನು  ಖಂಡಿಸಿ ರಾಜ್ಯ ಸರಕಾರದ ವಿರುದ್ಧ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಬೆಳ್ತಂಗಡಿ 
 ಮಿನಿ ವಿಧಾನ ಸೌಧದ ಎದುರು ಗುರುವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದಲ್ಲಿ ಆರೆಸ್ಸೆಸ್‌ ಸಂಘದ ಕಾರ್ಯಕರ್ತರನ್ನು ಸಿಎಂ ಮಾಡುವುದು ಬಿಟ್ಟು ವಲಸಿಗ, ಮೂಲತಃ ಜೆಡಿಎಸ್ ಪರಿವಾರದ ಬೊಮ್ಮಾಯಿ ಅವರನ್ನು ಸಿ.ಎಂ ಮಾಡಿದ್ದು ಅವರೊಬ್ಬ ಅವಿವೇಕಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಟೀಕಿಸಿದರು.

ಹಿಂದುತ್ವದ ಹೆಸರಿನಲ್ಲಿ ಅಧಿಕಾರ ಪಡೆದು ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ಬಿಜೆಪಿ ಸರಕಾರ ದಾಳಿ ಮಾಡುತ್ತಿದೆ. ಶಾಸಕರು ಸಂಸದರು ಇದನ್ನು ನೋಡಿ ಮೌನವಾಗಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಇಂತಹ ಹೇಯ ಕೃತ್ಯ ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಮೊದಲು ಬೆಳ್ತಂಗಡಿ ಅಯ್ಯಪ್ಪ ಮಂದಿರದ ಬಳಿಯಿಂದ ತಾಲೂಕು ಮಿನಿ ವಿಧಾನ ಸೌದದ ವರೆಗೆ ಬೃಹತ್ ಪ್ರತಿಭಟನಾ ರಾಲಿ ನಡೆಯಿತು.

ಪ್ರತಿಭಟನೆಯ ನೇತೃತ್ವವನ್ನು ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಗೌರವಾಧ್ಯಕ್ಷ ಹರೀಶ್ ಬರೆಮೇಲು, ಅಧ್ಯಕ್ಷ ಅನಿಲ್ ಕುಮಾರ್, ಕಾರ್ಯದರ್ಶಿ ಸಂದೀಪ್, ಸಂಚಾಲಕ ಮನೋಜ್ ಕುಂಜರ್ಪ, ಪ್ರಮುಖರಾದ ಪ್ರಜ್ವಲ್, ವೆಂಕಪ್ಪ ಕೋಟ್ಯಾನ್, ಮೊದಲಾದವರು ವಹಿಸಿದ್ದರು.

ಧಾರ್ಮಿಕ ಕೇಂದ್ರಗಳನ್ನು ಯಾರೇ ಒಡೆದರೂ ಅವರು ಭಯೋತ್ಪಾದಕರಾಗಿದ್ದಾರೆ. ಬಿಜೆಪಿಗರಿಗೆ ಹಿಂದುತ್ವ ಕೇವಲ ಅಧಿಕಾರಕ್ಕಾಗಿ ಮಾತ್ರ ಇರುವುದೇ? ಬಿಜೆಪಿಯಲ್ಲಿ ಭ್ರಷ್ಟಾಚಾರಿಗಳು, ಅತ್ಯಾಚಾರಿಗಳು ತುಂಬಿದ್ದಾರೆ. ಕಡಿಮೆಯಾಗಿರುವುದಕ್ಕೆ ಹೊರಗಿನಿಂದಲೂ ತರುತ್ತಿದ್ದಾರೆ ಎಂದರು.
-----

ಶಾಸಕರು, ಸಂಸದರ ಸಿಡಿ ಇವೆ- ಅಗತ್ಯ ಬಿದ್ದರೆ ಹೊರಬಿಡುತ್ತೇನೆ; 
ರಾಜ್ಯದಲ್ಲಿ ಮಹಿಳಾ ದೌರ್ಜನ್ಯ, ಅತ್ಯಾಚಾರ ಅಧಿಕವಾಗಿದೆ. ರಾಜ್ಯದಲ್ಲಿ
ಅಧಿಕಾರಕ್ಕೆ ಬಂದು ಎರಡೇ ವರ್ಷದಲ್ಲಿ ಹಲವು ಶಾಸಕರು ಕೋಟ್ಯಾಧೀಶರಾಗಿದ್ದಾರೆ. ಇದು ಹೇಗೆ ಸಾಧ್ಯವಾಗಿದೆ ಎಂಬುದು ನಮಗೆ ಸ್ಪಷ್ಟವಾಗಿ ತಿಳಿದಿದೆ. ಇನ್ನೂ ಅನೇಕ ಶಾಸಕರು ಮತ್ತು ಸಂಸದರ ಸಿಡಿಗಳಿವೆ. ಅದನ್ನು ಅಗತ್ಯ ಸಂದರ್ಭದಲ್ಲಿ ಹೊರಬಿಡುತ್ತೇನೆ.
*ಮಹೇಶ್ ಶೆಟ್ಟಿ ತಿಮರೋಡಿ

----
ಸೌಜನ್ಯ ಪ್ರಕರಣದ ವೇಳೆ ಸಿಎಂ ಆಗಿದ್ದ ಡಿವಿ ಮಾನ‌ ಇಂದು ಬೀದಿಗೆ ಬಂದಿದೆ;
ಅಂದು ನೇತ್ರಾವತಿ ಬಳಿ ವಿದ್ಯಾರ್ಥಿನಿ ಸೌಜನ್ಯಾ  ಅತ್ಯಾಚಾರ- ಕೊಲೆಯಾದಾಗ ಡಿ.ವಿ.ಸದಾನಂದ ಗೌಡ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅದೇ ಸೌಜನ್ಯಾಳ ಶಾಪ ಡಿವಿಗೆ ಇಂದು ತಟ್ಟಿದ್ದು, ಈಗ ಅವರ ಮಾನ ಕೂಡ ಬೀದಿಗೆ ನಂದಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.
 
ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment