Posts

"ವೈದ್ಯರ ದಿನಾಚರಣೆ " ಯ ಪ್ರಯುಕ್ತ ಬೆಳಾಲಿನ ಮೂರು ಮಂದಿ‌ ವೈದ್ಯರಿಗೆ ಸನ್ಮಾನ

0 min read


ಬೆಳ್ತಂಗಡಿ; ವೈದ್ಯರ ದಿನಾಚರಣೆ ಪ್ರಯುಕ್ತ ಜು.1 ರಂದು ಬೆಳಾಲು ಗ್ರಾಮದಲ್ಲಿ ಸೇವೆ ನೀಡುತ್ತಿರುವ ವೈದ್ಯರಾದ ಡಾ. ಚೇತನ್, ಡಾ. ಸೌಮ್ಯಾ ಚೇತನ್ ಹಾಗೂ ಡಾ. ಶಶಿಕುಮಾರ್ ರವರಿಗೆ ಬೆಳಾಲು ಮೈತ್ರಿ ಯುವಕ ಮಂಡಲದ ಸಾರಥ್ಯದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಬೆಳಾಲು ಸಹಕಾರಿ ಸಂಘದ ನಿರ್ದೇಶಕ ಸುಲೈಮಾನ್ ಬೆಳಾಲು ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಅತಿಥಿಗಳಾಗಿದ್ದ ಬೆಳಾಲು ಎಸ್‌ಡಿಎಂ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ರಾಮಕೃಷ್ಣ‌ ಭಟ್ ಚೊಕ್ಕಾಡಿ, ತಾ. ಪಂ. ಅಧ್ಯಕ್ಷ ಜತ್ತಣ್ಣ ಗೌಡ‌ವೈದ್ಯರ ಸೇವೆಯನ್ನು ಅಭಿನಂದಿಸಿ ಮಾತನಾಡಿದರು.

ಗ್ರಾ.ಪಂ  ಪಿಡಿಒ ದೀಪಕ್ ರಾಜ್,  ಮೈತ್ರಿ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಮತ್ತು ಕಾರ್ಯದರ್ಶಿ ಮುಹಮ್ಮದ್, ಗೌರವಾಧ್ಯಕ್ಷ ಮೋಹನ್ ಗೌಡ, ನೋಟರಿ ವಕೀಲ ಶ್ರೀನಿವಾಸ ಗೌಡ, ಅನ್ಸಾರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಆದಂ, ಮುರಳಿ ಇಂಜಿನಿಯರ್, ಅಶೋಕ, ಶಾಮರಾಯ, ನಝೀರ್, ಶುಭಚಂದ್ರ ಜೈನ್ ಮತ್ತಿತರರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment