ಬೆಳ್ತಂಗಡಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇದೆ ಸೇವಾದಳ ವಿಭಾಗದ ಬೆಳ್ತಂಗಡಿ ನಗರ ಬ್ಲಾಕ್ ಅಧ್ಯಕ್ಷರಾಗಿ ಸಮಾಜಸೇವಕ ಎಮ್.ಕೆ.ಅಬ್ದುಸ್ಸಮದ್ ಕುಂಡಡ್ಕ ನೇಮಕಗೊಂಡಿದ್ದಾರೆ.
ದೀರ್ಘ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿ, ಯುವ ಕಾಂಗ್ರೆಸ್ ಸಹಿತ ವಿವಿಧ ಸಮಿತಿಗಳಲ್ಲಿ ಪಕ್ಷ ನೀಡಿದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅರ್ಹತೆಯ ಆಧಾರದಲ್ಲಿ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳ ಘಟಕ ಈ ಹುದ್ದೆಗೆ ನಿಯುಕ್ತಿಗೊಳಿಸಿದೆ.ಸಂಘಟನಾ ಚಾತುರ್ಯ, ಜನಪರ ನಿಲುವುಗಳ ಮೂಲಕ ಅವರು ಈಗಾಗಲೇ ಪಕ್ಷದ ನಾಯಕರ ಗಮನಸೆಳೆದಿದ್ದಾರೆ.