Posts

ನದಿನೀರಿನಲ್ಲಿ ಈಜುತ್ತಿದ್ದ ಮೂವರ ಮೇಲೆ ಹಲ್ಲೆ: ನಾಲ್ವರ ವಿರುದ್ಧ ಪ್ರಕರಣ ದಾಖಲು

0 min read


ಬೆಳ್ತಂಗಡಿ; ಕಡಿರುದ್ಯಾವರ ಗ್ರಾಮದ  ಎರ್ಮಾಲಪಲ್ಕೆ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಈಜುತ್ತಿದ್ದ ಸಂದರ್ಭ ಮೂವರಿಗೆ ಅಪರಿಚಿತ ನಾಲ್ವರು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ‌ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.‌

ಈ ಸಂಬಂಧ ಉಜಿರೆ ಗ್ರಾಮದ ಕುದ್ಯಾಡಿ ನಿವಾಸಿ ಸದಾಶಿವ ಅವರು  ನೀಡಿದ ದೂರಿನಂತೆ ಪೊಲೀಸರು ಪದರಕರಣ ದಾಖಲಿಸಿದ್ದಾರೆ.

ದೂರುದಾರ ಸದಾಶಿವ ಮತ್ತು  ಗೆಳೆಯರಾದ ಮಧುಕರ ಹಾಗೂ ದಿನೇಶ ಎಂಬವರು ಬೆಳ್ತಂಗಡಿ  ತಾಲೂಕು ಕಡಿರುದ್ಯಾವರ ಗ್ರಾಮದ ಎರ್ಮಾಳಪಲ್ಕೆ ಎಂಬಲ್ಲಿರುವ  ನೇತ್ರಾವತಿ ಹೊಳೆಯ ನೀರಿನಲ್ಲಿ ಈಜಲು ಹೋದಾಗ ಅಲ್ಲಿಗೆ ಬಂದ 4 ಜನ ಅಪರಿಚಿತ ವ್ಯಕ್ತಿಗಳು ಈ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.

ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment