Posts

ಕರ್ನಾಟಕ ಮುಸ್ಲಿಂ ಜಮಾಅತ್ "ಸಹಾಯ್" ತುರ್ತು ಸೇವಾ ತಂಡಕ್ಕೆ ಸಮವಸ್ತ್ರ ವಿತರಣೆ

1 min read


ಬೆಳ್ತಂಗಡಿ; ಕರ್ನಾಟಕ ಮುಸ್ಲಿಂ ಜಮಾಅತ್ ಇದರ ನೇತೃತ್ವದಲ್ಲಿ ಎಸ್‌ವೈಎಸ್, ಎಸ್ಸೆಸ್ಸೆಫ್ ಮತ್ತು ಕೆಸಿಎಫ್ ಸಹಯೋಗದೊಂದಿಗೆ ಕಾರ್ಯಾಚರಿಸುವ ಕೋವಿಡ್ ವಾರಿಯರ್ಸ್ "ಸಹಾಯ್" ತುರ್ತು ಸೇವಾ ತಂಡದ ಸಭೆ ಮತ್ತು ಸಮವಸ್ತ್ರ ವಿತರಣೆ ಶನಿವಾರ ನಡೆಯಿತು.

ಅಧ್ಯಕ್ಷತೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ತಾ. ಅಧ್ಯಕ್ಷ ಎಸ್.ಎಂ ಕೋಯ ತಂಙಳ್ ವಹಿಸಿದ್ದರು.


ಸಹಾಯ್ ತಂಡದ ಕಾರ್ಯಾಚರಣೆ ಯನ್ನು ತಳಮಟ್ಟದಲ್ಲಿ ಪ್ರಬಲವಾಗಿ ಕಟ್ಟುವ ಉದ್ದೇಶದಿಂದ ರಾಜ್ಯ-ಜಿಲ್ಲಾ ಸಮಿತಿ ನಿರ್ದೇಶನದಂತೆ 15 ಮಂದಿಯ ತಂಡವನ್ನು ರಚಿಸುವ ಬಗ್ಗೆ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ನಾಯಕ ಸಾದಿಕ್ ಮಾಸ್ಟರ್ ವಿಷಯ ಮಂಡಿಸಿದರು. ಬಳಿಕ ತಂಡ ರಚಿಸಲಾಯಿತು.

ಸಹಾಯ್ ಜಿಲ್ಲಾ ಕಾರ್ಯಕಾರಿ ಸದಸ್ಯ ಎಂ.ಶರೀಫ್ ಬೆರ್ಕಳ ಪೂರಕ ಮಾಹಿತಿ ನೀಡಿದರು.

ಸಭೆಯಲ್ಲಿ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಅಬ್ಬೋನು ಮದ್ದಡ್ಕ, ಮಾಧ್ಯಮ‌ ಸಂಯೋಜಕ‌ ಅಶ್ರಫ್ ಆಲಿಕುಂಞಿ ಮುಂಡಾಜೆ, ಎಸ್‌ವೈಎಸ್ ಸೆಂಟರ್ ಪ್ರತಿನಿಧಿಗಳಾಗಿರುವ ಸಹಾಯ್  ಅಮೀರ್ ಗಳಾದ ಪಿ.ಯು ಅಬ್ದುಲ್ ರಹಿಮಾನ್ ಮುಸ್ಲಿಯಾರ್ ನಾವೂರಉ, ಎಂ‌.ಎ ಕಾಸಿಂ ಮುಸ್ಲಿಯಾರ್ ಮಾಚಾರ್, ಫಾರೂಕ್ ಸಖಾಫಿ ಶಾಂತಿನಗರ, ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಅಧ್ಯಕ್ಷ ಹಾರಿಸ್ ಕುಕ್ಕುಡಿ, ಕೋಶಾಧಿಕಾರಿ ಝಮೀರ್ ಸ‌ಅದಿ ಲಾಯಿಲ ಇವರು ಉಪಸ್ಥಿತರಿದ್ದರು.

ಸಹಾಯ್ ಬೆಳ್ತಂಗಡಿ ತಂಡದ ಡೈರೆಕ್ಟರ್ ಗಳಾದ ಹಂಝ ಮದನಿ ಮತ್ತು ರಶೀದ್ ಬಲಿಪಾಯ ಇವರಿಗೆ ಗುರುತುಚೀಟಿ ವಿತರಿಸಲಾಯಿತು. ಅಲ್ಲದೆ ಸಹಾಯ್ ನಾಲ್ಕೂ ತಂಡಕ್ಕೆ ಸಮವಸ್ತ್ರ ವನ್ನು ಇದೇ ವೇಳೆ ಡೈರೆಕ್ಟರ್ ಗಳಿಗೆ ಹಸ್ತಾಂತರಿಸಲಾಯಿತು. ಮುಸ್ಲಿಂ ಜಮಾಅತ್ ತಾ.‌ಕಾರ್ಯದರ್ಶಿ, ಮಾಜಿ ಸೈನಿಕ‌ ಮುಹಮ್ಮದ್ ರಫಿ ಸ್ವಾಗತಿಸಿ ಪ್ರಸ್ತಾವನೆಗೈದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment