Posts

ಬೆಳ್ತಂಗಡಿ ಧರ್ಮ ಪ್ರಾಂತ್ಯದಿಂದ ಆಸ್ಪತ್ರೆ, ಆರೋಗ್ಯ ಕಾರ್ಯಕರ್ತರಿಗೆ ಮೆಡಿಕಲ್ ಉಪಕರಣಗಳ ಕಿಟ್ ಕೊಡುಗೆ

1 min read

ಬೆಳ್ತಂಗಡಿ: ಇಲ್ಲಿನ ಧರ್ಮ ಪ್ರಾಂತ್ಯದ ಕೋವಿಡ್ ಟಾಸ್ಕ್ ಫೋರ್ಸ್ ಇದರ ನೇತೃತ್ವದಲ್ಲಿ ಮುಂಡಾಜೆ, ಇಂದಬೆಟ್ಟು ಹಾಗೂ ನೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ತಪಾಸಣೆಗೆ ನೆರವಾಗುವ ಅಗತ್ಯ ಮೆಡಿಕಲ್ ಉಪಕರಣಗಳುಳ್ಳ ಕಿಟ್ ನ್ನು ಕೊಡುಗೆಯಾಗಿ ನೀಡಲಾಯಿತು.

ಮುಂಡಾಜೆ ಆಸ್ಪತ್ರೆಯ ವೈದ್ಯಾಧಿಕಾರಿ  ಕಾವ್ಯಾ ವೈಪನಾ,   ಇಂದಬೆಟ್ಟು ಪ್ರಾ. ಆ. ಕೇಂದ್ರದ ವೈದ್ಯಾಧಿಕಾರಿ ಡಾ. ಡಾಯಾನ ಹಾಗೂ ನೆರಿಯದಲ್ಲಿ ಡಾ.ವಾಣಿಶ್ರೀ ಸದ್ರಿ ಕಿಟ್ ಪಡೆದುಕೊಂಡರು. ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಆಯ್ದ ಮನೆಗಳ ಕೋವಿಡ್ ಹಾಗೂ ಇತರೆ ರೋಗಿಗಳ ಆರೋಗ್ಯ ತಪಾಸಣೆಗಾಗಿ ಪಲ್ಸ್ ಆಕ್ಸಿಮೀಟರ್, ಸ್ಟೀಮ್ ಇನ್ ಹೆಲರ್, ಡಿಜಿಟಲ್ ಥರ್ಮೋಮೀಟರ್ ಗಳನ್ನು ಈ ಕಿಟ್ ಒಳಗೊಂಡಿದೆ.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ಹಾಗೂ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಕೋವಿಡ್ ಕಾರ್ಯಪಡೆ ಸಂಯೋಜಕ ವಂ. ಫಾ.ಬಿನೋಯಿ ಎ.ಜೆ, ಬೆಳ್ತಂಗಡಿ ಧರ್ಮ ಪ್ರಾಂತ್ಯದ ಕೆ.ಎಸ್.ಎಂ.ಸಿ.ಎ ನಿರ್ದೇಶಕ ಫಾ.ಷಾಜಿ ಮಾತ್ಯು, ತೋಟತ್ತಾಡಿ ಪೊರೋನಾ ಸಂಯೋಜಕ ಫಾ. ಜೋಸ್ ಪೂವತಿಂಗಲ್, ಇಂದಬೆಟ್ಟು ಚರ್ಚಿನ ಧರ್ಮಗುರು

ಫಾ.ಜೋಜಿ ವಡಕ್ಕೆವೀಟ್ಟಿಲ್, ನೆರಿಯ ಗ್ರಾ.ಪಂ.  ಉಪಾಧ್ಯಕ್ಷೆ ಕುಶಲಾ, ಸದಸ್ಯರುಗಳಾದ ಬಾಬು ಗೌಡ ಪರ್ಪಾಳ, ಸುಮಂಗಲಾ, ವಿನ್ಸೆಂಟ್ ಡಿ ಪೌಲ್ ಸೊಸೈಟಿ ಗಂಡಿಬಾಗಿಲು ಇದರ ಅಧ್ಯಕ್ಷ ಚಾಂಡಿ ಸಿ.ವಿ, ಸೈಂಟ್ ಥೋಮಸ್ ಚರ್ಚ್ ಗಂಡಿಬಾಗಿಲು ಇದರ ಟಾಸ್ಕ್ ಫೋರ್ಸ್ ನ ಕ್ಯಾಪ್ಟನ್ ಅಜಿತ್ ಮೈಕೆಲ್ ಮೊದಲಾದವರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment