Posts

ಕಾಜೂರು ಮಹಿಳಾ ಶರೀಅತ್ ಮತ್ತು ದ‌ಅವಾ ಕಾಲೇಜು ನೂತನ ಕಟ್ಟಡ ಗುರುವಾರ ಉದ್ಘಾಟನೆ

1 min read

ಬೆಳ್ತಂಗಡಿ: ಹಯಾತುಲ್ ಔಲಿಯಾ ದರ್ಗಾ ಶರೀಫ್ ಕಾಜೂರು ಇಲ್ಲಿ ಸುಲ್ತಾನುಲ್ ಉಲಮಾ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಉಸ್ತಾದ್ ಸಾರಥ್ಯದಲ್ಲಿ  ನಿರ್ಮಾಣಗೊಂಡಿರುವ ಮಹಿಳಾ ಶರೀಅತ್ ಮತ್ತು ದ‌ಅವಾ ಕಾಲೇಜು ನೂತನ ಕಟ್ಟಡ ಉದ್ಘಾಟನಾ‌ ಕಾರ್ಯಕ್ರಮ ಜ.14 ಗುರುವಾರ  ದಂದು ಮಗ್ರಿಬ್ ನಮಾಝ್ ಬಳಿಕ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ಪ್ರಧಾನ‌ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು ತಿಳಿಸಿದ್ದಾರೆ.

ಸಮಾರಂಭದಲ್ಲಿ ಕಾಜೂರು ಗೌರವಾಧ್ಯಕ್ಷ ಸಯ್ಯಿದ್ ಕುಂಬೋಳ್ ತಂಙಳ್, ಸುನ್ನೀ‌‌ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್‌ ತಂಙಳ್, ‌ಕಾಜೂರು ಶಿಕ್ಷಣ ಸಂಸ್ಥೆಗಳ‌ ಪ್ರಾಂಶುಪಾಲ‌ ಸಯ್ಯಿದ್ ಕಾಜೂರು ತಂಙಳ್ ಮುಂದಾಲತ್ವದಲ್ಲಿ ಎಲ್ಲ‌ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ.

ಸಮಾರಂಭದಲ್ಲಿ ಜಿಲ್ಲೆಯ ಪ್ರಮುಖ ಗಣ್ಯರುಗಳು, ಕೇರಳ ಕಲ್ಲಿಕೋಟೆಯ ಆರ್‌ಸಿಎಫ್ ನ‌ ಅಧಿಕಾರಿಗಳು, ಕರ್ನಾಟಕ ವಕ್ಫ್ ಬೋರ್ಡ್‌ ನ‌ ಜಿಲ್ಲಾ ಸದಸ್ಯರು ಮತ್ತು ಅಧಿಕಾರಿಗಳು, ವಿವಿಧ‌ ಜಮಾಅತ್ ಗಳ ಮುಖ್ಯಸ್ಥರುಗಳು, ವಿವಿಧ ಕ್ಷೇತ್ರದ ಮುಖಂಡರುಗಳು ಭಾಗಿಯಾಗಲಿದ್ದಾರೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ದಿನ‌ ರಾತ್ರಿ ದರ್ಗಾ ಸನ್ನಿಧಿಯಲ್ಲಿ ಮಾಸಿಕ‌ ಸ್ವಲಾತ್‌ ಮಜ್ಲಿಸ್, ಮೌಲಿದ್ ಪಾರಾಯಣ, ಸಾಮೂಹಿಕ ಪ್ರಾರ್ಥನೆ, ಖುತುಬಿಯತ್ ನೇರ್ಚೆ ಕೂಡ ನಡೆಯಲಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment