ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಸಮುದಾಯ ವಿಭಾಗದಿಂದ ಬಂದಾರು ಗ್ರಾಮದ ಅಭಿವೃದ್ಧಿ ಸಮಿತಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿ ಆಡಳಿತ ಮಂಡಳಿ(ರಿ ) ಬೈಪಾಡಿ ಇವರಿಗೆ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಅರ್ಚಕರ ಗೃಹ ನಿರ್ಮಾಣದ ಕಾರ್ಯಕ್ಕೆ ರೂ. 2ಲಕ್ಷ ದ ಡಿ. ಡಿ. ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಅವರು ಹಸ್ತಾಂತರಿಸಿದರು
ಈ ಸಂದರ್ಭ ಬಸದಿಯ ಕಾರ್ಯದರ್ಶಿ ಜಗದೀಶ್ ಜೈನ್, ಕೃಷ್ಣರಾಜ್ ಜೈನ್, ಪುಷ್ಪದತ್ತ ಜೈನ್, ಸುಭಾಷ್ ಜೈನ್,
ಅರ್ಚಕರಾದ ಸುದರ್ಶನ್ ಹಾಗೂ ಸಮಿತಿ ಸದಸ್ಯರು, ಕಣಿಯೂರು ವಲಯದ ಮೇಲ್ವಿಚಾರಕ ಮಾಧವ ಮತ್ತು ಸೇವಾ ಪ್ರತಿನಿಧಿ ನಿರಂಜನ್ ಹಾಜರಿದ್ದರು.