ಬೆಳ್ತಂಗಡಿ; ಕಾಜೂರು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಇಲ್ಲಿ ಪ್ರತೀ ವಾರ ನಡೆಸಲ್ಪಡುವ ಸ್ವಲಾತ್ ಕಾರ್ಯಕ್ರಮ ಫೆ.18 ರಂದು ಗುರುವಾರ ನಡೆಯಿತು.
ಕಾಜೂರು ಮುದರ್ರಿಸ್ ಕೆ. ಹೆಚ್ ಸಿರಾಜುದ್ದೀನ್ ಝುಹುರಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಕಾಜೂರಿನಲ್ಲಿ ಇತ್ತೀಚೆಗೆ ಪ್ರಾರಂಭಿಸಲಾದ ಮಹಿಳಾ ಶರೀಅತ್ ಕಾಲೇಜಿನ ಕಟ್ಟಡಕ್ಕೆ ಲೈಟಿಂಗ್ ಮತ್ತು ಫ್ಯಾನ್ ಕೊಡುಗೆ ನೀಡಿ, ಸಮಾರಂಭದ ಪ್ರಮುಖ ಅತಿಥಿಯಾಗಿದ್ದ ಕಾಸರಗೋಡು ಆಲಂಪಾಡಿ ತಾಜ್ ನಗರ ನಿವಾಸಿ, ಉದ್ಯಮಿ ಹಾಜಿ ಪಿ.ಬಿ ಅಹಮ್ಮದ್ ಆಮುಚ್ಚ ಅವರನ್ನು ಕಾಜೂರು ಸಮಿತಿ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾಜೂರು ಆಡಳಿತ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಅವರು ಜಂಟಿಯಾಗಿ ಈ ಸನ್ಮಾನ ನೆರವೇರಿಸಿದರು.
ಇದೇ ವೇಳೆ ಆಮುಚ್ಚ ಅವರು ಈ ದಿನದ ಸ್ವಲಾತ್ ಶೀರಣಿಯಾಗಿ ಅನ್ನದಾನದ ವ್ಯವಸ್ಥೆಯನ್ನು ಅವರೇ ಒದಗಿಸಿಕೊಟ್ಟು, ಮುಂದಕ್ಕೂ ಕಾಜೂರಿನ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕಾರ ಇರುವುದಾಗಿ ತಿಳಿಸಿದರು.
ಈ ಸಮಾರಂಭದಲ್ಲಿ ಕೋಶಾಧಿಕಾರಿ ಕೆ.ಎಮ್ ಕಮಾಲ್ ಕಾಜೂರು, ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕಟ್ಟೆಚಾವಡಿ, ಸದಸ್ಯರಾದ ಮುಹಮ್ಮದ್ ಅಲಿ, ಅಬ್ಬಾಸ್, ಸಿದ್ದೀಕ್ ಕೆ.ಹೆಚ್, ಬದ್ರುದ್ದೀನ್, ಎನ್.ಎಮ್ ಯಾಕೂಬ್, ಅಬ್ದುಲ್ ಖಾದರ್ ಪಯ್ಯೆ, ಉಮರ್ಕುಂಞಿ ಕೆ.ಹೆಚ್, ವ್ಯವಸ್ಥಾಪಕ ಶಮೀಮ್, ಶಾಲಾ ಮುಖ್ಯೋಪಾಧ್ಯಾಯ ಎ.ಹೆಚ್ ನಾಸಿರ್ ಮಾಸ್ಟರ್, ಮಹಿಳಾ ಶರೀಅತ್ ಉಪಪ್ರಾಂಶುಪಾಲ ಅಬ್ದುಲ್ ಖಾದರ್ ಸಅದಿ, ಸದರ್ ಉಸ್ತಾದ್ ರಶೀದ್ ಮದನಿ, ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯ ಅಂಬುಲೆನ್ಸ್ ಚಾಲಕ ಅಯೂಬ್ ಆಲಿಕುಂಞಿ ಮುಂಡಾಜೆ, ಕಾಸರಗೋಡು ನಿವಾಸಿಗಳಾದ ರಫೀಕ್ ಮತ್ತು ಮುಹಮ್ಮದ್, ಮೊದಲಾದವರು ಉಪಸ್ಥಿತರಿದ್ದರು.