ಬೆಳ್ತಂಗಡಿ: ಮುಂಡಾಜೆಯ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ವಾರ್ಷಿಕ ದೀಪೋತ್ಸವ ಭಾನುವಾರ ಜರಗಿತು.
ಶ್ರೀ ಪರಶುರಾಮ, ಸಿದ್ಧಿ ವಿನಾಯಕ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸೇವೆಗಳು, ಶ್ರೀ ದೇವರಿಗೆ ಅಡಕೆ, ತೆಂಗು ಹಾಗೂ ಇತರ ಕೃಷಿ ಉತ್ಪನ್ನಗಳ ಸಹಿತ ರಾಶಿ ಪೂಜೆ, ಮಹಾಪೂಜೆ, ಸಂಜೆ ದೇವರ ಉತ್ಸವ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ಜರಗಿತು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮುಂಡಾಜೆ ಗ್ರಾಮದ ಅಂಗನವಾಡಿಗಳಾದ ಕುಂಟಾಲಪಲ್ಕೆ,ಕೊಂಬಿನಡ್ಕ,ಚಾಮುಂಡಿನಗರ,ಕೊಟ್ರೊಟ್ಟು ಅಂಗನವಾಡಿಯ ಮಕ್ಕಳಿಂದ ಮನರಂಜನೆ, ಸುಧಾಕರ ದೇವಾಡಿಗ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ,ಯಕ್ಷಗಾನ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳು ಜರಗಿದವು.
ಜಾತ್ರೋತ್ಸವದ ಪ್ರಯುಕ್ತ ಶಾಸಕ ಹರೀಶ್ ಪೂಂಜ, ಎಂ ಎಲ್ ಸಿ ಪ್ರತಾಪ ಸಿಂಹ ನಾಯಕ್ ಮುಂತಾದ ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಜೆ ವೆಂಕಟೇಶ್ವರ ಭಟ್ ಹಾಗೂ ಪದಾಧಿಕಾರಿಗಳು ಭಕ್ತರಿಗೆ ಅನುಕೂಲ ಒದಗಿಸಿಕೊಟ್ಟರು.
ವರದಿ: ಅಚ್ಚು ಮುಂಡಾಜೆ
9449640130