ಬೆಳ್ತಂಗಡಿ; 25 ಮದ್ರಸಗಳ ಒಕ್ಕೂಟವಾದ ಬೆಳ್ತಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಆಶ್ರಯದಲ್ಲಿ ಕಕ್ಕಿಂಜೆ ಜುಮಾ ಮಸೀದಿಯ ಸಹಯೋಗದಲ್ಲಿ ನಡೆದ "ಮುಸಾಬಕ-2k21" ವಿದ್ಯಾರ್ಥಿಗಳ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆಯು ಕಕ್ಕಿಂಜೆ ಮದ್ರಸದ ವಠಾರದಲ್ಲಿ ನಡೆಯುತು.
6 ವಿಭಾಗಗಳಲ್ಲಿ 27 ವಿಷಯಗಳಲ್ಲಿ 222 ವಿದ್ಯಾರ್ಥಿಗಳು ಭಾಗವಹಿಸಿದ್ದ ಸ್ಪರ್ಧಾವಳಿಯು ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದ ಯಶಸ್ಸಿಗಾಗಿ ರೇಂಜ್ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ದಾರಿಮಿಯ ಪರಿಶ್ರಮಸಿದರು..
ರೇಂಜ್ ಅಧ್ಯಕ್ಷ ಅಶ್ರಫ್ ಫೈಝಿ, ಮುಸಾಬಕ ಚೆಯರ್ಮಾನ್ ಅಝೀಝ್ ಅಶ್ಶಾಫಿ ಸೇವೆ ನೀಡಿದರು. ಕಕ್ಕಿಂಜೆ ಮಸೀದಿ ಸಿಬ್ಬಂದಿಗಳು ಹಾಗೂ ಜಮಾಅತ್ ಆಡಳಿತ ಸಮಿತಿ ಸಹಿತ ಯುವಕರು ಸಹಕಾರ ನೀಡಿದರು. ಶರಫುದ್ದೀನ್ ಅಝ್ಹರಿ ಉಸ್ತಾದ್, ನೌಶಾದ್ ಅಝ್ಹರಿಯ, ಕಕ್ಕಿಂಜೆ ಸದರ್ ಉಸ್ತಾದ್ ಸಿದ್ದೀಕ್ ರಹ್ಮಾನಿ, ಕಾರ್ಯನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದ ಅಬೂಬಕರ್ ಮುಸ್ಲಿಯಾರ್ ಗಾಂಧಿನಗರ, ಸಿನಾನ್ ಹುದವಿ , ಸಿದ್ದೀಕ್ ಅಝ್ಹರಿ ಬೆಳ್ತಂಗಡಿ, ನೂರುಲ್ ಅಬ್ಸಾರ್ ಫೈಝಿ, ಮುಂಡೂರು ಸಅದಿ ಜವಾಬ್ದಾರಿಯನ್ನು ನಿರ್ವಹಿಸಿದರು.ಟೀಂ ಮೆನೇಜರ್ ಗಳು, ತೀರ್ಪುಗಾರರು ಯಶಸ್ಸಿಗೆ ಕಾರಣರಾದರು.ಕಾರ್ಯಕ್ರಮಕ್ಕೆ ಕಕ್ಕಿಂಜೆ ಜಮಾಅತಿನ ಆಡಳಿತ ಸಮಿತಿ, ಕಕ್ಕಿಂಜೆ ಎಸ್ಕೆಎಸ್ಎಸ್ಎಫ್ ನ ಸದಸ್ಯರು, ಅಲ್ ಫಲಾಹ್ ಟೀಂ ಕಕ್ಕಿಂಜೆ ಸಾಥ್ ನೀಡಿದರು.
ಸ್ಪರ್ಧೆಯಲ್ಲಿ ಜಲಾಲಿಯ ನಗರ ಮದ್ರಸ ಚಾಂಪಿಯನ್ ಶಿಪ್ ಗಳಿಸಿದರೆ, ಫಸ್ಟ್ ರನ್ನರ್ ಅಪ್ ಪಡೆದ ಕಕ್ಕಿಂಜೆ ಮದ್ರಸ, ಸೆಕೆಂಡ್ ರನ್ನರ್ ಅಪ್ ಪುಂಜಾಲಕಟ್ಟೆ ಮದ್ರಸ ಮೂಡಿಬಂದವು. ಪ್ರಧಾನ ಸಂಚಾಲಕ ಅಬ್ದುಲ್ ಮಜೀದ್ ದಾರಿಮಿ ಪುಂಜಾಲಕಟ್ಟೆ ಧನ್ಯವಾದ ಸಮರ್ಪಿಸಿದರು.