ಬೆಳ್ತಂಗಡಿ : ಎಸ್ಎಸ್ಎಲ್ಸಿ ಪರೀಕ್ಷೆಯನ್ನು ರದ್ದುಗೊಳಿಸಿ ಎಂದು ಕೋರಿ ಹೈಕೋರ್ಟ್ಗೆ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ .
ಪಿಯು ಪರೀಕ್ಷೆ ರದ್ದು ಮಾಡಲು ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ಎಸ್ ಎಸ್ಎಲ್ಸಿ ಪರೀಕ್ಷೆಯನ್ನೂ ರದ್ದುಗೊಳಿಸಿ ಎಂದು ಸಿಂಗ್ರೆಗೌಡ ಎನ್ನುವವರಿ ಅರ್ಜಿ ಸಲ್ಲಿಸಿದ್ದಾರೆ.
ಕೋವಿಡ್ 19 ರ ಸಂಕಷ್ಟದ ಮಧ್ಯೆ ಸರ್ಕಾರ SSLC ಪರೀಕ್ಷೆಯನ್ನು ನಡೆಸುತ್ತಿದೆ . ಸರ್ಕಾರದ ಈ ನಿರ್ಧಾರ ಸರಿ ಇಲ್ಲ . 3 ನೇ ಅಲೆ ಬರುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ . ಇದರಲ್ಲಿ ಹಲವಾರು ಮಕ್ಕಳಿಗೆ ಕೊವೀಡ್ 19 ಹರಡುವ ಸಂಭವ ಇದೆ . ಬೇರೆ ರಾಜ್ಯಗಳು ಮಕ್ಕಳ ಹಳೆಯ ದಾಖಲೆಗಳನ್ನು ನೋಡಿ ಉತ್ತೀರ್ಣಗೊಳಿಸಿದ್ದಾರೆ. ಅದೇ ರೀತಿ ಎಸ್ಸೆಸ್ಸೆಲ್ಸಿ ಮಕ್ಕಳನ್ನೂ ಪಾಸ್ ಮಾಡಬೇಕು ಎಂಬುದು ಅರ್ಜಿಯಲ್ಲಿ ಬೇಡಿಕೆ. ಇದಕ್ಕೆ ಸಂಬಂಧಪಟ್ಟ ಕಡೆಯಿಂದ ಯಾವ ರೀತಿ ಪ್ರತಿಕ್ರಿಯೆ ಬರಲಿದೆ ಎಂದು ಕಾದುನೋಡುವ ಸರದಿ ನಮ್ಮದು.