ಬೆಳ್ತಂಗಡಿ: ಬಳಂಜ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತೆಂಕಕಾರಂದೂರು 2 ನೇ ವಾರ್ಡಿನಿಂದ ಎಸ್ಡಿಪಿಐ ಬೆಂಬಲಿತರಾಗಿ ಜಯಗಳಿಸಿದ "ನಿಝಾಮ್ ಕಟ್ಟೆ" ಅವರಿಗೆ, ಬದ್ರಿಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ ಇದರ ಜಮಾಅತ್ ಕಮಿಟಿ ವತಿಯಿಂದ, ಖತೀಬ್ ಹಸ್ವೀಫ್ ದಾರಿಮಿ ನೇತ್ರತ್ವದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಮಾಅತ್ ಕಮಿಟಿ ಗೌರವಾಧ್ಯಕ್ಷ ಶೇಖಬ್ಬ ದರ್ಖಾಸ್, ಅಧ್ಯಕ್ಷ ನವಾಝ್ ಕಟ್ಟೆ, ರಫೀಕ್ ಜಿ.ಎ ಬಾಂಬಿಲ, ಉಪಾಧ್ಯಕ್ಷ ಸಂಶುದ್ಧೀನ್ ಕಟ್ಟೆ, ಎಸ್ಡಿಪಿಐ ತೆಂಕಕಾರಂದೂರು ಗ್ರಾಮ ಸಮಿತಿ ಅಧ್ಯಕ್ಷ ಹಸನ್ ಕಟ್ಟೆ, ಮತ್ತು ಗಣ್ಯರು ಉಪಸ್ಥಿತರಿದ್ದರು.