ಬೆಳ್ತಂಗಡಿ; ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಮಾಚಾರು ಮುಹಮ್ಮದ್ ವಲಿಯುಲ್ಲಾಹಿ ರವರ ಉರೂಸ್ ಸಮಾರಂಭಕ್ಕೆ ಎಸುಕ್ರವಾರ ಜುಮುಅ ನಮಾಝಿನ ಬಳಿಕ ಜಮಾಅತ್ ಅಧ್ಯಕ್ಷ ಬಿ.ಎಮ್ ಇಲ್ಯಾಸ್ ರವರ ನೇತೃತ್ವದಲ್ಲಿ ಧ್ವಜಾರೋಹಣ ಮಾಡಿ ಚಾಲನೆ ನೀಡಲಾಗಿದ್ದು ಇಂದು(ಜ.30) ಸಾಮಾರೋಪ ಸಮಾರಂಭ ಮತ್ತು ಸಾಮೂಹಿಕ ಪ್ರಾರ್ಥನಾ ಮಜ್ಲಿಸ್ ಸಂಪನ್ನಗೊಳ್ಳಲಿದೆ.
ಉರೂಸ್ ಸಮಾರೋಪ ಪ್ರಯುಕ್ತ ಇಂದು ಸಂಜೆ 3.00 ಕ್ಕೆ ಜಮಾಅತ್ ಖಾಝಿಯೂ ಆಗಿರುವ ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ಆಗಮಿಸಲಿದ್ದು ವಿಶೇಷ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ.
ಶುಕ್ರವಾರ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಸ್ಜಿದ್ ಖತೀಬ್ ರಫೀಕ್ ಸಖಾಫಿ ಆತೂರು, ಗೌರವಾಧ್ಯಕ್ಷ ಹಂಝ, ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮಾಚಾರ್, ಕೋಶಾಧಿಕಾರಿ ಹಸೈನಾರ್, ಅಕ್ಬರ್ ಬದ್ರಿಯ, ಪಳ್ಳಿದಡ್ಕ ಅಧ್ಯಕ್ಷ ಇಬ್ರಾಹಿಮ್, ಮುಅಲ್ಲಿಮ್ ಉಸ್ತಾದ್ ಹಾರಿಸ್ ಲತೀಫಿ, ಡಿ ಎಚ್ ಇಸ್ಮಾಯಿಲ್ ಸಖಾಫಿ, ಬೆಳಾಲು ಸದರ್ ಉಸ್ತಾದ್ ಬದ್ರುದ್ದೀನ್ ಸಖಾಫಿ, ಉಪಾಧ್ಯಕ್ಷ ಸಲೀಮ್ ಅಂಗಡಿ , ಜೊತೆಕಾರ್ಯದರ್ಶಿ ಹಕೀಮ್ ಕುದುರು, ಉಜಿರೆ ಸೆಕ್ಟರ್ SSF ಅಧ್ಯಕ್ಷ ಅನ್ಸಾರ್ ಸಅದಿ ಮಾಚಾರ್, SSF ಮಾಚಾರು ಶಾಖೆ ಅದ್ಯಕ್ಷ ಅನ್ಸಾರ್ ಬೆದ್ರಳಿಕೆ, ಹಾಗೂ SYS & SSF ಕಾರ್ಯಕರ್ತರು ಹಾಗೂ ಜಮಾಅತರು ಉಪಸ್ಥಿತರಿದ್ದರು.