ಕಾರ್ಯಾಚರಣೆಯಲ್ಲಿ ಮೃತದೇಹ ಮೇಲೆತ್ತಿದ ಎಸ್ಡಿಪಿಐ ರೆಸ್ಕ್ಯೂ ತಂಡ
ಬೆಳ್ತಂಗಡಿ; ಸುಲ್ಕೇರಿ ಸನಿಹದ ಜಂತಿಗೊಳಿ ಎಂಬಲ್ಲಿಂದ ಮಂಗಳವಾರ ಮಧ್ಯಾಹ್ನದಿಂದ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ಮಗುವಿನ ಮೃತದೇಹ ಬುಧವಾರ ಪಕ್ಕದ ನದಿಯಲ್ಲಿ ಪತ್ತೆಯಾಗಿದೆ.
ಮಗುವಿನ ಪತ್ತೆ ಕಾರ್ಯಾಚರಣೆಯಲ್ಲಿಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ, ಪೊಲೀಸ್, ಅಗ್ನಿಶಾಮಕ ಇಲಾಖೆಯೊಂದಿಗೆ ಎಸ್ಡಿಪಿಐ ರೆಸ್ಕ್ಯೂ ತಂಡವೂ ಕೈಜೋಡಿಸಿದ್ದು ಅವರ ತಂಡಕ್ಕೇ ಇಂದು ಮಗುವಿನ ದೇಹ ಸಿಕ್ಮಿದೆ.ತುರ್ತು ಸ್ಪಂದನೆ ವಿಶೇಷ ತರಬೇತಿ ಪಡೆದಿರುವ ಎಸ್ಡಿಪಿಐ ಕಾರ್ಯಕರ್ತರಾದ ಆಸಿಫ್ ಕಟ್ಟೆ, ನಿಯಾಝ್ ಕಟ್ಟೆ, ಶಫಿ ಕಟ್ಟೆ, ಆರಿಸ್ ಕಟ್ಟೆ, ಸಿದ್ದೀಕ್ ಗುಂಡೇರಿ, ಫೈಝಲ್ ಮತ್ತು ಹನೀಫ್ ಕಟ್ಟೆ ರವರು, ಖಾಸಿಂ ಕಟ್ಟೆ ಅವರ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸಿದ್ದು ಮಗುವಿನ ಮೃತದೇಹವನ್ನು ಪತ್ತೆಹಚ್ಚಿ ಮೇಲಕ್ಕೆತ್ತಿದ್ದಾರೆ.
ಸುಲ್ಕೇರಿ ಜಂತಿಗೋಳಿ ಪರಾರಿ ನಿವಾಸಿ ಸಂಜೀವ ಶೆಟ್ಟಿ ಎಂಬವರ ಪುತ್ರಿ ಸುಚಿತ್ರಾ ಮತ್ತು ಸುಭಾಷ್ ದಂಪತಿಯ ಎರಡೂವರೆ ವರ್ಷದ ಮಗುವೇ ಮಂಗಳವಾರ ನಾಪತ್ತೆಯಾಗಿದ್ದ ಮಗು. ದಂಪತಿ ಮಗುವಿನೊಂದಿಗೆ ತವರು ಮನೆಯಲ್ಲಿಯೇ ವಾಸ್ತವ್ಯವಿದ್ದರು.
ಮಂಗಳವಾರ ಮಧ್ಯಾಹ್ನ ಸುಚಿತ್ರಾ ರವರು ಮಗುವನ್ನು ಮನೆಯಲ್ಲಿಯೇ ಬಿಟ್ಟು ತಮ್ಮ ತಾಯಿಯೊಂದಿಗೆ ಹಸುಗಳಿಗೆ ಹುಲ್ಲು ತರಲೆಂದು ತೋಟಕ್ಕೆ ಹೋಗಿದ್ದರು. ಹಿಂದಿರುಗಿ ಬಂದ ವೇಳೆ ಮಗು ಮನೆಯಲ್ಲಿ ಕಾಣಿಸದೇ ಇರುವುದನ್ನು ಕಂಡು ಹುಡುಕಾಟ ನಡೆಸಿದ್ದಾರೆ. ಆದರೆ ಮಗುವಿನ ಸುಳಿವು ಲಭ್ಯವಾಗಿರಲಿಲ್ಲ. ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್,
ವೇಣೂರು ಸಬ್ ಇನ್ಸ್ಪೆಕ್ಟರ್ ಲೋಲಾಕ್ಷ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿದ್ದು ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದರು. ಪ್ರತಿಕೂಲ ವಾತಾವರಣ ದಿಂದಾಗಿ ಮಂಗಳವಾರ ರಾತ್ರಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಬುಧವಾರ ಬೆಳ್ಳಂಬೆಳಗ್ಗೆ ಸ್ವಯಂಸೇವಕರು ಮತ್ತೆ ಹುಡುಕಾಡ ನಡೆಸಿ ಕೊನೆಗೂ ಮಗುವನ್ನು ಜೀವಂತ ಪತ್ತೆಹಚ್ಚಲು ಸಾಧ್ಯವಾಗಲೇ ಇಲ್ಲ.