Posts

ರಬ್ಬರ್ ಗೆ ಬೆಂಬಲ ಬೆಲೆ: KSMCA, ಉಜಿರೆ ರಬ್ಬರ್ ಸೊಸೈಟಿ ನಿಯೋಗದಿಂದ ಸಚಿವ ಮುನಿರತ್ನ ಭೇಟಿ

1 min read

ಬೆಳ್ತಂಗಡಿ; ರಬ್ಬರ್ ಬೆಲೆ ಕುಸಿತ ಹಾಗೂ ಇತರ ಸಮಸ್ಯೆಗಳ ಬಗ್ಗೆ ಕರ್ನಾಟಕ ಸೀರೋ ಮಲಬಾರ್  ಕ್ಯಾಥೋಲಿಕ್  ಅಸೋಸಿಯೇ ಶನ್  ಮತ್ತು ಉಜಿರೆ ರಬ್ಬರ್ ಸೊಸೈಟಿ ಇದರ ಜಂಟಿ ನಿಯೊ ತ್ವದಲ್ಲಿ ಜ.10 ರಂದು ಬೆಂಗಳೂರಿನಲ್ಲಿ ತೋಟ ಗಾರಿಕೆ ಸಚಿವ ಮುನಿರತ್ನ ಅವರನ್ನು  ಬೇಟಿ ಮಾಡಿ ಮಾತುಕತೆ ನಡೆಸಿ ಮನವಿ ಸಲ್ಲಿಸಲಾಯಿತು.

ಈ ಭೇಟಿಯ ವೇಳೆ, ರಬ್ಬರ್ ಕೃಷಿಕರ  ಸಮಸ್ಯೆಯನ್ನು ಎಳೆಎಳೆಯಾಗಿ ಸಚಿವರಿಗೆ ಮನವರಿಕೆ ಮಾಡಲಾಯಿತು.

ಅದೂ ಅಲ್ಲದೆ ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ  ಬೆಂಬಲ ಬೆಲೆ ಘೋಷಿಸುವಂತೆ  ಮನವಿಸಲಾಯಿತು.

ಈ ವೇಳೆ ಪ್ರತಿಕ್ರಿಯಿಸಿದ ಸಚಿವರ, ತಮ್ಮ ಅಹವಾಲಿನ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಿಯೋಗದ ನೇತೃತ್ವವನ್ನು ಶಾಸಕ  ಹರೀಶ್ ಪೂಂಜಾ ವಹಿಸಿದ್ದರು. 

ನಿಯೋಗದಲ್ಲಿ ಕೆ ಎಸ್ ಎಂ ಸಿ ಎ ನಿರ್ದೇಶಕ  ಫಾ.  ಶಾಜಿ ಮಾತ್ಯು, ಅಧ್ಯಕ್ಷ ಬಿಟ್ಟಿ ನೆಡುನಿಲಂ, ಪ್ರಧಾನ ಕಾರ್ಯದರ್ಶಿ ಸೆಬಾಸ್ಟಿಯನ್ ಎಂ.ಜೆ,‌ ಪಿಆರ್‌ಒ ಸೆಬಾಸ್ಟಿಯನ್ ಪಿ ಸಿ, ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ್ ಜಿ‌ ಭಿಡೆ, ಉಪಾಧ್ಯಕ್ಷ ಅನಂತ್ ಭಟ್  ಮಚ್ಚಿಮಲೆ, ಸಿಇಒ ರಾಜು ಶೆಟ್ಟಿ, ನಿರ್ದೇಶಕ ಹೆಚ್ ಪದ್ಮ ಗೌಡ ಮೊದಲಾದವರು  ಉಪಸ್ಥಿತರಿದ್ದರು.

ವರದಿ: ಅಚ್ಚು ಮುಂಡಾಜೆ

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment