ಬೆಳ್ತಂಗಡಿ; ಸೆಪ್ಟೆಂಬರ್ 25 ಮತ್ತು 26 ರಂದು ಗದಗ ಜಿಲ್ಲಾ ಇಂಡೋರ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯ ಅಂಡರ್ 21 ವಿಭಾಗದಲ್ಲಿ ಬೆಳ್ತಂಗಡಿ ಯಮಟೋ ಶೊಟೋಕಾನ್ ಕರಾಟೆ ಇದರ ಸದಸ್ಯೆ ಸಿಂಚನಾ ಎಂ.ಡಿ. ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಸಿಂಚನಾ ಅವರು ತನ್ನ ಕರಾಟೆ ಶಿಕ್ಷಣವನ್ನುಮುಖ್ಯ ಗುರುಗಳಾದ ಶಾಜು ಮುಲಾವನ, ಬೆಳ್ತಂಗಡಿ ಶಾಖೆಯ ಅಶೋಕ್ ಆಚಾರ್ಯ ಮತ್ತು ಮಿಥುನ್ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.
ಇವರು ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆಗಿರುವ ದುರ್ಗಾದಾಸ್ ಮತ್ತು ರೇವತಿ ದಂಪತಿಯ ಪುತ್ರಿಯಾಗಿದ್ದಾರೆ.