ಬೆಳ್ತಂಗಡಿ; ಅಬ್ಬಿ ಜಲಪಾತ ವೀಕ್ಷಣೆಗಾಗಿ ಬೆಂಗಳೂರಿನಿಂದ ಆಗಮಿಸಿದ್ದ 17 ಮಂದಿ ಇದ್ದ ಕುಟುಂಬವೊಂದ ಐದು ವರ್ಷದ ಮಗುವೊಂದು ಬಿದ್ದು ಮುಖ ಮತ್ತು ತಲೆಗೆ ಗಂಭೀರ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಶ್ರೇಯಾ ಎಂಬ ಬಾಲಕಿಯೇ ಗಾಯಗೊಂಡವರು. ಸ್ಥಳಕ್ಕೆ ಬೆಳ್ತಂಗಡಿ ತಾಲೂಕಿನ ಕಡೆಯಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಬೆಳ್ತಂಗಡಿ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.
ಚಾರಣಿಗರು ಮೂಡಿಗೆರೆ ತಾಲೂಕು ಬಾಳೂರು ಬಳ್ಳಾಲರಾಯನದುರ್ಗ ಕಡೆಯಿಂದ ಅಬ್ಬಿ ಜಲಪಾತದ ಕಡೆಗೆ ಬಂದಿದ್ದರು. ಈ ವೇಳೆ ಬಳಗದಲ್ಲಿದ್ದ ಐದು ವರ್ಷದ ಮಗು ಶ್ರೇಯಾ ಪಾಚಿಗಟ್ಟಿದ ಕಲ್ಲಿನ ಮೇಲೊಂದರಿಂದ ಅಲ್ಪ ಆಳಕ್ಕೆ ಜಾರಿ ಬಿದ್ದರು. ಈ ವೇಳೆ ಅವರ ಮುಖ, ತಲೆಗೆ ಹೆಚ್ಚಿನ ಗಾಯವಾದರೆ ಮೈ ಮೇಲೆ ತರಚಿದ ಗಾಯಗಳಾಗಿವೆ. ತಕ್ಷಣ ಅವರನ್ನು ಕುಟುಂಬಿಕರೇ ಮೇಲೆತ್ತಿಕೊಂಡು ಅತ್ತ ಬಾಳೂರು ಕಡೆಗೇ ಮರಳಿದ್ದಾರೆ .ಕಾಲ್ನಡಿಗೆ ದಾರಿ ಮುಗಿದ ಬಳಿಕ ಮಗುವನ್ನು ವಾಹನದ ಮೂಲಕ ಆಸ್ಪತ್ರೆಗೆ ಕರೆದೊಯ್ಯಬೇಕಾಗಿದೆ. ಅಗ್ನಿಶಾಮಕ ಇಲಾಖೆಯ ಮಂಗಳೂರಿನ ಅಧಿಕಾರಿ ಭರತ್, ಬೀಟ್ ಪೊಲೀಸ್ ಇಬ್ರಾಹಿಂ ಹಾಗೂ ಇತರ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದಾರೆ. ಆದರೆ ಗಾಯಾಳುಗಳು ತಾವು ಆಗಮಿಸಿದ ಅಬ್ಬಿ ಜಲಪಾತದ ಆ ಕಡೆಯ ಬಾಳೂರು ಭಾಗವಾಗಿ ಮರಳಿದ್ದಾರೆ ಎನ್ನಲಾಗಿದೆ.