ಬೆಳ್ತಂಗಡಿ; ಇಲ್ಲಿನ ಸಂತ ಲಾರೆನ್ಸ್ ಕ್ಯಾಥೆಡ್ರಲ್ ದೇವಾಲಯದ
ಸೆಂಟ್ ಲಾರೆನ್ಸ್ ಕೋವಿಡ್ ನಿಧಿಯಿಂದ ಸುಮಾರು ನಲವತ್ತು ಸಾವಿರ ರೂಪಾಯಿಯ ಚೆಕ್ಕನ್ನು ಗಂಡಿಬಾಗಿಲಿನ ಸಿಯೋನ್ ಆಶ್ರಮಕ್ಕೆ ನೀಡಲಾಯಿತು.
ಆಶ್ರಮದ ಸೇವೆಯ ಬಗ್ಗೆ ಮೆಚ್ಚುಗೆ ಸೂಚಿಸಿ ಯೇಸು ಕ್ರಿಸ್ತರ ಬೋಧನೆ ನಿರಂತವಾಗಿ ಕೃತಿಯ ರೂಪದಲ್ಲಿ ಜನಮಧ್ಯದಲ್ಲಿ ಬೋದಿಸಲ್ಪಡಲಿ ಎಂದು ಈ ಸಂದರ್ಭದಲ್ಲಿ ಕಥೆಡ್ರಲ್ ಚರ್ಚ್ ಧರ್ಮಗುರು ವಂ. ಫಾ. ಥೋಮಸ್ ಕಣ್ಣಾಂಕಲ್ ತಿಳಿಸಿದರು.
ಸಿಯೋನ್ ಆಶ್ರಮಕ್ಕೆ ಆಹಾರಕ್ಕೆ ಮತ್ತು ಅಲ್ಲಿನ ಆರೋಗ್ಯ ಸಿಬ್ಬಂದಿಗೆ ಗೌರವ ಧನವಾಗಿ ಇದನ್ನು ಕೊಡುವಂತೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಚರ್ಚಿನ ಧರ್ಮಗುರುಗಳಾದ ಚರ್ಚಿನ ಟ್ರಸ್ತೀಗಳಾದ ಅಜಯ್, ಥೋಮಸ್, ರೆಜಿ, ವಿನು ರೂಪೇಶ್, ಅಭಿಲಾಶ್, ಸೈಬು, ಬೆನ್ನಿ ಹಾಗೂ ಗಂಡಿಬಾಗಿಲಿನ ಚರ್ಚ್ ನ ಧರ್ಮಗುರು ವಂ. ಫಾ. ಷಾಜಿ ಮಾತ್ಯು ಉಪಸ್ಥಿತರಿದ್ದರು. ಸಿಯೋನ್ ಆಶ್ರಮ ಟ್ರಸ್ಟಿ ಯು. ಸಿ ಪೌಲೋಸ್ ಅವರು ದೇಣಿಗೆ ಮೊತ್ತದ ಚೆಕ್ಕನ್ನು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು.