Posts

ರಾಜ್ಯ ಸರಕಾರ ಒದಗಿಸಿದ ಆಕ್ಸಿಜನ್ ರಾಜ್ಯ ಸರ್ಕಾರದ ವತಿಯಿಂದ ಕಾನ್ಸಂಟ್ರೇಟರ್ ಗಳನ್ನು ತಾಲೂಕು ಆಸ್ಪತ್ರೆಗೆ ಹಸ್ತಾಂತರಿಸಿದ ಶಾಸಕ ಹರೀಶ್ ಪೂಂಜ

0 min read


ಬೆಳ್ತಂಗಡಿ; ಇತ್ತೀಚೆಗೆ ಶಾಸಕರು ಬೆಂಗಳೂರು ಪ್ರವಾಸದಲ್ಲಿದ್ದ ವೇಳೆ ಸರಕಾರದ ಜೊತೆ ನಿವೇದಿಸಿಕೊಂಡಂತೆ ಉಪ ಮುಖ್ಯಮಂತ್ರಿಗಳಾ ಡಾ. ಅಶ್ವಥ್ ನಾರಾಯಣ ಅವರು ಹಸ್ತಾಂತರಿಸಿದ 5 ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಮಂಗಳವಾರ ಶಾಸಕ ಹರೀಶ್ ಪೂಂಜ ಅವರು  ಬೆಳ್ತಂಗಡಿ ತಾಲೂಕು ಕೇಂದ್ರದ ಆಸ್ಪತ್ರೆಗೆ ಅದನ್ನು ಹಸ್ತಾಂತರಿಸಿದರು.

ತಾಲೂಕು ಸಮುದಾಯ   ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ  ಡಾ. ವಿದ್ಯಾವತಿ ಅವರ ಮುಖಾಂತರ ಸಾರ್ವಜನಿಕರ ಬಳಕೆಗಾಗಿ ಈ ವ್ಯವಸ್ಥೆ ಹಸ್ತಾಂತರಿಸಲ್ಪಟ್ಟಿತು.

ಈ ಸಂದರ್ಭದಲ್ಲಿ ತಾಲೂಕು ವೈಧ್ಯಾಧಿಕಾರಿ ಡಾ.ಕಲಾಮಧು, ಮಾಲಾಡಿ ಕ್ಷೇತ್ರದ ತಾಲೂಕು ಪಂಚಾಯತ್ ಮಾಜಿ ಸದಸ್ಯ ಜೋಯಲ್ ಮೆಂಡೋನ್ಸ ಮತ್ತು ಪಡಂಗಂಡಿ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಕೋಟ್ಯಾನ್ ಇವರು ಜೊತೆಗಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment