ಬೆಳ್ತಂಗಡಿ; ಉಡುಪಿಯಿಂದ ಚಿಕ್ಕಮಗಳೂರು ಕಡೆಗೆ ಟೆಂಪೋಟ್ರಾವೆಲರ್ನಲ್ಲಿ ಪ್ರಾಯಾಣಿಸುತ್ತಿದ್ದ ವೇಳೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಟಿ.ಟಿ ಧರೆಗೆ ಗುದ್ದಿ ಅಪಘಾತವಾಗಿದೆ.
ಚಾಲಕನ ನಿಯಂತ್ರಣ ಕಳೆದುಕೊಂಡ ಟಿ.ಟಿ ಧರ್ಮಸ್ಥಳ ಪಾದಯಾತ್ರಿಗಳಿಗೂ ಗುದ್ದಿದ್ದು ಒಟ್ಟು 10 ಕ್ಕೂ ಅಧಿಕ ಮಂದಿಗೆ ಗಾಯವಾಗಿದೆ.
ಗಾಯಾಳುಗಳ ಪೈಕಿ ಇಬ್ಬರಿಗೆ ಗಂಭೀರ ಏಟು ತಗುಲಿದೆ. ಅಪಘಾತ ವಿವರ ತಿಳಿದ ತಕ್ಷಣ ಚಾರ್ಮಾಡಿ ಹಸನಬ್ಬ ಮತ್ತು ಅವರ ಮಕ್ಕಳು ಸ್ಥಳಕ್ಕೆ ಧಾವಿಸಿ ಸಾರ್ವಜನಿಕರ ನೆರವಿನೊಂದಿಗೆ ಗಾಯಾಳುಗಳನ್ನು ಉಜಿರೆಯ ಬೆನಕ ಆಸ್ಪತ್ರೆಗೆ ಸಾಗಿಸುವ ಕೆಲಸದಲ್ಲಿ ನೆರವಾಗಿದ್ದಾರೆ. ಗಾಯಾಳುಗಳ ವಿವರ ತಿಳಿದುಬರಬೇಕಿದೆ.ಹೆಚ್ಚಿನ ವಿವರ ತಿಳಿಯಲಿದೆ.