ಬೆಳ್ತಂಗಡಿ: ಅಳದಂಗಡಿ ರಸ್ತೆಯ ಕೆದ್ದು ಎಂಬಲ್ಲಿ ಬೆಳಿಗ್ಗೆ ನಡೆದ ಓಮ್ನಿ ಕಾರು ಮತ್ತು ರಿಕ್ಷಾ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪಿಲ್ಯ ನಿವಾಸಿ ಭುಜಬಲಿ ಹೆಗ್ಡೆ (60ವ.) ಆಸ್ಪತ್ರೆಗೆ ಸಾಗಿಸುವ ಮಧ್ಯೆ ಅಸುನೀಗಿದ್ದಾರೆ.
ಅಪಘಾತದಲ್ಲಿ ಮೃತರ ಪತ್ನಿ ಲಲಿತಾ ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರುತಿ ಕಾರಿನಲ್ಲಿದ್ದ ಶಿವಮೊಗ್ಗದ ಉಷಾ ಮತ್ತು ಚಾಲಕ ನಾಗಭೂಷಣ, ರಿಕ್ಷಾದಲ್ಲಿದ್ದ ಮೃತರ ಮಗ ಅಭಿಜಿತ್, ರಿಕ್ಷಾ ಚಾಲಕ ಶಶಿಧರ ಅವರಿಗೂ ಗಾಯವಾಗಿದೆ