Posts

ಕೆರೆಗೆ ಬಿದ್ದು ಒಂದು ವರ್ಷ ಒಂಭತ್ತು ತಿಂಗಳ ಮಗು ಸಾವು

ಬೆಳ್ತಂಗಡಿ; ತಾಯಿಯ ಜೊತೆ ಎಂದೂ ಮನೆಯ ತೋಟದ ಕೆರೆಯ ಬಳಿಗೆ‌ ಹೋಗುತ್ತಿದ್ದ ಒಂದು‌ವರ್ಷ ಒಂಭತ್ತು ತಿಂಗಳ ಗಂಡು ಮಗುವೊಂದು ತಾಯಿಗೆ ಅರಿವಿಲ್ಲದೆ ಕೆರೆಯ ಬಳಿ ಹೋಗಿದ್ದು ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಪಟ್ಟೋಡಿ ಎಂಬಲ್ಲಿಂದ ವರದಿಯಾಗಿದೆ.

ಮೃತ ಬಾಲಕನನ್ನು  ಇಲ್ಲಿನ ನಿವಾಸಿ ಜಗದೀಶ ಎಂಬವರ ಪುತ್ರ ಪ್ರಣೀತ್ ಎಂಬವರೆಂದು ಗುರುತಿಸಲಾಗಿದೆ.

ಬಾಲಕನು ಯಾವತ್ತೂ ತನ್ನ ತಾಯಿಯ ಜೊತೆ ಕೆರೆಯ ಬಳಿ ತೆರಳುತ್ತಿದ್ದನು. ಇಂದು ತಂದೆ ತಾಯಿ ಇಬ್ಬರೂ ಮನೆ ಕೆಲಸದಲ್ಲಿ ನಿರತರಾಗಿದ್ದಾಗ ಅವರ ಅರಿವಿಗೆ ಬಾರದೆ‌ ಕೆರೆಯ ಬಳಿ ತೆರಳಿದ್ದನು. 

ಮಗು ಕಾಣದಾದಾಗ ಹುಡುಕುತ್ತಾ ತಂದೆ ವೀರಪ್ಪ ಅವರು ಕೆರೆಯಲ್ಲಿ ಹುಡುಕಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official